HEALTH TIPS

ಗೊಂದಲ, ವಿವಾದಗಳಿಂದ ವ್ಯಥ೵ವಾದ ಅಮೂಲ್ಯ ಸಮಯಗಳು: ಬಿಜೆಪಿ ವಿರುದ್ಧ ಆರ್‍ಎಸ್‍ಎಸ್ ಟೀಕೆ

                      ಕೊಚ್ಚಿ: ಬಿಜೆಪಿ ರಾಜ್ಯ ನಾಯಕತ್ವದ ಲೋಪಗಳಿಂದ ಚುನಾವಣೆಯಲ್ಲಿ ಭಾರಿ ಸೋಲು ಕಂಡಿದೆ ಎಂದು ಆರ್‍ಎಸ್‍ಎಸ್ ತೀವ್ರವಾಗಿ ಟೀಕಿಸಿದೆ. ಕೊಚ್ಚಿಯಲ್ಲಿ ನಡೆದ ಆರ್‍ಎಸ್‍ಎಸ್-ಬಿಜೆಪಿ ನಾಯಕರ  ಸಭೆಯಲ್ಲಿ  ಬಿಜೆಪಿಯನ್ನು ತೀವ್ರವಾಗಿ ಟೀಕಿಸಲಾಗಿದೆ. ಚುನಾವಣಾ ಪ್ರಕ್ರಿಯೆ ಸೇರಿದಂತೆ ರಾಜ್ಯ ನಾಯಕತ್ವ ವಿಫಲವಾಗಿದೆ ಎಂದು ಬೈಟಕ್ ಬೊಟ್ಟುಮಾಡಿದೆ. 

            ಬಿಜೆಪಿಯಲ್ಲಿ ತೀವ್ರಗೊಂಡಿರುವ ಗುಂಪುಗಾರಿಕೆ ವಿರುದ್ಧವೂ ಟೀಕೆಗಳು ವ್ಯ್ತಗೊಂಡಿದೆ. ಪ್ರತಿ ನಾಯಕರ ಚಟುವಟಿಕೆಗಳನ್ನು ಮೌಲ್ಯಮಾಪನ ಮಾಡಲು ಮತ್ತು ವಿವರವಾದ ಲೆಕ್ಕಪರಿಶೋಧನೆ ನಡೆಸಲು ಸಂಘ ಪರಿವಾರ ಮುಖಂಡರು ಸಭೆಯಲ್ಲಿ ಚಚಿ೵ಸಿರುವರು. ಚುನಾವಣಾ ಪ್ರಕ್ರಿಯೆಯಲ್ಲಿ ಸಮನ್ವಯದ ಒಟ್ಟಾರೆ ಗೊಂದಲವಿತ್ತು.  ಅಭ್ಯಥಿ೵ಗಳ ನಾಮನಿದೇ೵ಶನದಲ್ಲಿ ಅನಗತ್ಯ ವಿವಾದಕ್ಕೆ ಕಾರಣವಾಗಿದೆ. ಇದೆಲ್ಲವೂ ಸೋಲಿಗೆ ಕಾರಣವಾಯಿತು ಮತ್ತು ಅವರು ಅನಗತ್ಯ ವಿವಾದಕ್ಕೆ ಒಳಗಾದರು ಎಂಬ ಟೀಕೆಗಳು ವ್ಯಕ್ತಗೊಂಡಿದೆ. 

             ಪೈಪ್‍ಲೈನ್ ವಿವಾದ, ಚುನಾವಣೆಯಲ್ಲಿ ಸ್ಪಧಿ೵ಸಲು ಸಿಕೆ ಜಾನು ಅವರಿಗೆ 10 ಲಕ್ಷ ರೂ. ನೀಡಿರುವುದು, ಮಂಜೇಶ್ವರ ಉಮೇದುವಾರಿಕೆಯಿಂದ ಹಿಂದೆ ಸರಿಯಲು ಕೆ ಸುಂದರ ಅವರಿಗೆ 2 ಲಕ್ಷ ರೂ.ಗಳ ಲಂಚ ಸೇರಿದಂತೆ ಸಮಸ್ಯೆಗಳ ಆಧಾರದ ಮೇಲೆ ನಾಯಕತ್ವ ಸಭೆ ಕರೆಯಲಾಗಿತ್ತು. 

             ಸಭೆಯಲ್ಲಿ ಕೇಂದ್ರ ಸಚಿವ ವಿ ಮುರಲೀಧರನ್, ಬಿಜೆಪಿ ರಾಜ್ಯ ಅಧ್ಯಕ್ಷ ಕೆ.ಸುರೇಂದ್ರನ್ ಮತ್ತು ಸಂಘಟನಾ ಕಾಯ೵ದಶಿ೵ ಎಂ ಗಣೇಶ್ ಉಪಸ್ಥಿತರಿದ್ದರು. 


Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries