HEALTH TIPS

ಸಾಹಿತ್ಯ ಯಾನದ ಸರಣಿ 10ನೇ ಜಾಲಗೋಷ್ಠಿ ಕಾರ್ಯಕ್ರಮ ಇಂದು ಸಂಜೆ: ಡಾ.ಕೆ.ವೈ.ನಾರಾಯಣ ಸ್ವಾಮಿ ಅವರಿಂದ "ಕನ್ನಡ ನಾಟಕ ಪರಂಪರೆಯ ಶೋಧ" ಉಪನ್ಯಾಸ

                                                       

                  ಕಾಸರಗೋಡು: ಪೆರಿಯದ ಕೇರಳ ಕೇಂದ್ರೀಯ ವಿಶ್ವ ವಿದ್ಯಾಲಯದ ಭಾಷೆ ಮತ್ತು ತೌಲನಿಕ ಸಾಹಿತ್ಯ ವಿಭಾಗದ ಆಶ್ರಯದಲ್ಲಿ ನಡೆಯುತ್ತಿರುವ ಸರಣಿ ಜಾಲಗೋಷ್ಠಿಯ ಹತ್ತನೇ ಕಾರ್ಯಕ್ರಮ ಇಂದು ಸಂಜೆ ಗೂಗಲ್ ಮೀಟ್ ಜಾಲಕೊಂಡಿಯ ಮೂಲಕ ನಡೆಯಲಿದೆ.

           ಇಂದಿನ ಜಾಲಗೋಷ್ಠಿಯಲ್ಲಿ  "ಕನ್ನಡ ನಾಟಕ ಪರಂಪರೆಯ ಶೋಧ" ವಿಷಯದ ಬಗ್ಗೆ ನಾಟಕಕಾರ ಡಾ.ಕೆ.ವೈ. ನಾರಾಯಣ ಸ್ವಾಮಿ ಸಂಪನ್ಮೂಲ ವ್ಯಕ್ತಿಗಳಾಗಿ ಉಪನ್ಯಾಸ ನೀಡುವರು. ಕೇರಳ ಕೇಂದ್ರೀಯ ವಿಶ್ವವಿದ್ಯಾಲಯದ ಸಾಮಾಜಿಕ ವಿಜ್ಞಾನ ವಿಭಾಗದ ಡೀನ್ ಡಾ. ಮೋಹನ್ ಎ. ಕೆ. ಪ್ರಾಸ್ತಾವಿಕವಾಗಿ ಮಾತನಾಡುವರು. ಇಂದು (ಜು.28) ಸಂಜೆ 5 ರಿಂದ ಜಾಲಗೋಷ್ಠಿ ಆರಂಭಗೊಳ್ಳಲಿದ್ದು ಆಸಕ್ತರು ಜಾಲಕೊಂಡಿ  *https://meet.google.com/wjo-uxfd-zgf* ಮೂಲಕ ನೇರವಾಗಿ ಪಾಲ್ಗೊಳ್ಳಬಹುದು ಎಂದು ಸಂಘಟಕರು ತಿಳಿಸಿದ್ದಾರೆ.


 


Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries