HEALTH TIPS

ಕರ್ಕಟಕ ಮಾಸಪೂಜೆಗಾಗಿ ತೆರೆದುಕೊಂಡ ಶಬರಿಮಲೆ: ಇಂದಿನಿಂದ ಭಕ್ತರಿಗೆ ಪ್ರವೇಶಾನುಮತಿ

             ಪತ್ತನಂತಿಟ್ಟು: ಕರ್ಕಟಕ ಮಾಸ ಪೂಜೆಗಾಗಿ ಶಬರಿಮಲೆ ಸನ್ನಿಧಿ ಶುಕ್ರವಾರದಿಂದ ಬಾಗಿಲು ತೆರೆಯಲಾಗಿದೆ. ನಿನ್ನೆ ಸಂಜೆ 5 ಗಂಟೆಗೆ ತಂತ್ರಿವರ್ಯ ಕಂಠಾರರ್  ರಾಜೀವರ್ ಅವರು ದೇವಾಲದ ಬಾಗಿಲು ತೆರೆದರು. ನಿನ್ನೆ ಯಾತ್ರಿಕರಿಗೆ ಭೇಟಿಗೆ ಅನುಮತಿಸಿರಲಿಲ್ಲ. ಇಂದಿನಿಂದ ಭಕ್ತರ ಪ್ರವೇಶಕ್ಕೆ ಅನುಮತಿಸಲಾಗಿದೆ.  ಆನ್‍ಲೈನ್‍ನಲ್ಲಿ ಬುಕ್ ಮಾಡಿದ  ಸುಮಾರು 5,000 ಜನರಿಗೆ ಪ್ರತಿದಿನ ಸನ್ನಿಧಿ ಭೇಟಿ ನೀಡಲು ಅವಕಾಶವಿದೆ. 

             ವರ್ಚುವಲ್ ಕ್ಯೂ ಬುಕಿಂಗ್ ಪಡೆಯದ ಯಾರಿಗೂ ಮಲೆ ಏರಲು ಅನುಮತಿಸುವುದಿಲ್ಲ. ಯಾತ್ರಿಕರು 48 ಗಂಟೆಗಳ ಒಳಗೆ ಮಾಡಿಸಿದ  ಆರ್‍ಟಿಪಿಸಿಆರ್ ನಕಾರಾತ್ಮಕ ಪ್ರಮಾಣಪತ್ರ ಅಥವಾ 2 ಡೋಸ್ ಲಸಿಕೆ ತೆಗೆದುಕೊಂಡ ದಾಖಲೆಯನ್ನು ಹೊಂದಿರಬೇಕು. ಕೆಎಸ್‍ಆರ್‍ಟಿಸಿಯಿಂದ ಭಕ್ತಾದಿಗಳ ಪ್ರಯಾಣಕ್ಕೆ ವಿಶೇಷ ಸೇವೆಯನ್ನು ನಡೆಸಲಿದೆ.

             ಪಂಪಾದಲ್ಲಿ ಸೀಟ್ ಬುಕಿಂಗ್ ಸೌಲಭ್ಯವನ್ನು ಸ್ಥಾಪಿಸಲಾಗಿದೆ. ನಿಲಕ್ಕಲ್- ಪಂಪಾ ಚೈನ್ ಸೇವೆಗಾಗಿ 15 ಬಸ್ಸುಗಳನ್ನು ಮಂಜೂರು ಮಾಡಲಾಗಿದೆ. ಪಂಪಾ ಚೆಂಗನ್ನೂರು ರೈಲ್ವೆ ನಿಲ್ದಾಣದಿಂದ ವಿಶೇಷ ಸೇವೆಯನ್ನು ನಡೆಸಲಿದೆ. ಕರ್ಕಟಕ ಮಸಾಪೂಜೆಗಳು ಪೂರ್ಣಗೊಂಡ ನಂತರ ಈ ತಿಂಗಳ 21 ರಂದು ಶಬರಿಮಲೆ ಮತ್ತೆ ಮುಚ್ಚಲಾಗುವುದು.


Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries