HEALTH TIPS

'ಹುಲಿ ಮುಖ' ಧರಿಸಿ ಪ್ರತಿಭಟಿಸಿದ ಎಲ್‍ಡಿಎಫ್ ಕೌನ್ಸಿಲರ್‍ಗಳು: ತ್ರಿಶೂರಲ್ಲಿ ನಾಟಕೀಯ ವಿದ್ಯಮಾನ- ಸುರೇಶ್ ಗೋಪಿ ವಿರುದ್ಧ ಆಕ್ರೋಶ

ತ್ರಿಶೂರ್: ಕೇಂದ್ರ ಸಚಿವ ಸುರೇಶ್ ಗೋಪಿ ಘೋಷಿಸಿದ ನಿಧಿ ಒಂದು ವರ್ಷ ಕಳೆದರೂ ಲಭ್ಯವಾಗದಿರುವುದು ಪ್ರತಿಭಟನೆಗೆ ಕಾರಣವಾಯಿತು. ಕಳೆದ ಓಣಂ ಋತುವಿನಲ್ಲಿ ತ್ರಿಶೂರ್‍ನ ಪ್ರಮುಖ ಹುಲಿ ಸಂಘಟನೆಗಳಿಗೆ ಹಣಕಾಸು ನೆರವು ನೀಡಲು ವಿಫಲವಾದ ಬಗ್ಗೆ ಎಡಪಕ್ಷದ ಸದಸ್ಯರು ತ್ರಿಶೂರ್ ಕಾಪೆರ್Çರೇಷನ್ ಕೌನ್ಸಿಲ್ ಸಭೆಯಲ್ಲಿ ನಾಟಕೀಯ ಪ್ರತಿಭಟನೆ ನಡೆಸಿದರು.  


ಎಲ್‍ಡಿಎಫ್ ಕೌನ್ಸಿಲರ್‍ಗಳು ಕೌನ್ಸಿಲ್ ಸಭೆಯಲ್ಲಿ 'ಹುಲಿ ಮುಖ' ಧರಿಸಿ ತಮ್ಮ ತೀವ್ರ ಭಿನ್ನಾಭಿಪ್ರಾಯವನ್ನು ವ್ಯಕ್ತಪಡಿಸಿದರು. ಕೇಂದ್ರ ಹಣಕಾಸು ನೆರವು ವಿಳಂಬವಾಗುವುದರಿಂದ ಕೌನ್ಸಿಲ್‍ನಲ್ಲಿ ಆಡಳಿತ ಮತ್ತು ವಿರೋಧ ಪಕ್ಷಗಳ ನಡುವೆ ಬಿಸಿ ವಾಗ್ವಾದಗಳು ನಡೆದವು.

ಕಳೆದ ಓಣಂ ಋತುವಿನಲ್ಲಿ ಹುಲಿ ಕುಣಿತದಲ್ಲಿ ಭಾಗವಹಿಸಿದ ಪ್ರತಿ ಗುಂಪಿಗೆ ಕೇಂದ್ರ ಪ್ರವಾಸೋದ್ಯಮ ಸಚಿವಾಲಯದ ಯೋಜನೆಯಡಿಯಲ್ಲಿ 3 ಲಕ್ಷ ರೂಪಾಯಿಗಳನ್ನು ಆರ್ಥಿಕ ಸಹಾಯವಾಗಿ ನೀಡುವುದಾಗಿ ತ್ರಿಶೂರ್ ಸಂಸದ ಮತ್ತು ಕೇಂದ್ರ ಸಚಿವ ಸುರೇಶ್ ಗೋಪಿ ಘೋಷಿಸಿದ್ದರು. ಆದರೆ, ಅಗತ್ಯ ದಾಖಲೆಗಳನ್ನು ಡಿಟಿಪಿಗೆ ಹಸ್ತಾಂತರಿಸಿ ತಿಂಗಳುಗಳೇ ಕಳೆದರೂ ಹಣ ಬಂದಿಲ್ಲ ಎಂದು ದೂರಿನಲ್ಲಿ ಆರೋಪಿಸಲಾಗಿದೆ. ಕೇಂದ್ರ ಸಚಿವ ಸುರೇಶ್ ಗೋಪಿ ಸಾಂಸ್ಕøತಿಕ ಗುಂಪುಗಳಿಗೆ ಅರ್ಹವಾದ ಹಣವನ್ನು ನೀಡದೆ ವಂಚಿಸಿದ್ದಾರೆ ಮತ್ತು ಕೇಂದ್ರ ಸರ್ಕಾರವು ತ್ರಿಶೂರ್‍ನ ಸಾಂಸ್ಕೃತಿಕ ಪರಂಪರೆಯನ್ನು ನಿರ್ಲಕ್ಷಿಸುತ್ತಿದೆ ಎಂದು ನಿಗಮದ ವಿರೋಧ ಪಕ್ಷದ ನಾಯಕ ಟಿ.ಆರ್. ಹಿರಣ್ ಆರೋಪಿಸಿದ್ದಾರೆ.

ಆದಾಗ್ಯೂ, ಬಿಜೆಪಿ ಕೌನ್ಸಿಲರ್‍ಗಳು ಸದನದಲ್ಲಿ ಎಡಪಕ್ಷದ ಆರೋಪಗಳನ್ನು ಟೀಕಿಸಿದರು. ಕೇಂದ್ರ ಸರ್ಕಾರವು ಸೂಚಿಸಿದ ಕೆಲವು ತಾಂತ್ರಿಕ ಮಾನದಂಡಗಳನ್ನು ಪಾಲಿಸದ ಕಾರಣ ನಿಧಿಯಲ್ಲಿ ವಿಳಂಬವಾಗಿದೆ ಎಂದು ಬಿಜೆಪಿ ಕೌನ್ಸಿಲರ್‍ಗಳು ಆರೋಪಿಸಿದರು. 







ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries