HEALTH TIPS

ಸಹಕಾರ ಕ್ಷೇತ್ರ ಬಲಪಡಿಸಲು ಆದ್ಯತೆ: ಅಮಿತ್‌ ಶಾ

             ನವದೆಹಲಿ: 'ಸಹಕಾರ ಕ್ಷೇತ್ರ ಮತ್ತು ಎಲ್ಲ ಸಹಕಾರ ಸಂಸ್ಥೆಗಳನ್ನು ಇನ್ನಷ್ಟು ಬಲಪಡಿಸಲು ಸರ್ಕಾರ ಉದ್ದೇಶಿಸಿದೆ. ಈ ಕುರಿತು ಚರ್ಚಿಸಲು ದೇಶದ ಪ್ರಮುಖ ಸಹಕಾರಿಗಳ ಜೊತೆಗೆ ಸಭೆ ನಡೆಸಲಾಗಿದೆ' ಎಂAಅಅದು ಕೇಂದ್ರ ಸಹಕಾರ ಸಚಿವ ಅಮಿತ್‌ ಶಾ ಶನಿವಾರ ಇಲ್ಲಿ ಹೇಳಿದರು.

         ಮೂರು ದಿನಗಳ ಹಿಂದೆ ಕೇಂದ್ರ ಸಂಪುಟ ಪುನಾರಚನೆ ಮತ್ತು ಖಾತೆಗಳ ಮರುಹಂಚಿಕೆ ಮಾಡಿದ್ದ ಪ್ರಧಾನಿ ನರೇಂದ್ರ ಮೋದಿ ಅವರು ಸಹಕಾರ ಖಾತೆಯನ್ನು ಹೆಚ್ಚುವರಿಯಾಗಿ ಶಾ ಅವರಿಗೆ ವಹಿಸಿದ್ದರು.

ರಾಷ್ಟ್ರೀಯ ಸಹಕಾರ ಒಕ್ಕೂಟದ ಅಧ್ಯಕ್ಷ ದಿಲೀಪ್‌ ಸಂಘಾನಿ, ಭಾರತೀಯ ಕೃಷಿಕರ ರಸಗೊಬ್ಬರ ಸಹಕಾರ ಸಂಸ್ಥೆಯ (ಇಫ್ಕೊ) ಅಧ್ಯಕ್ಷ ಬಿ.ಎಸ್.ನಕಾಯ್, ವ್ಯವಸ್ಥಾಪಕ ನಿರ್ದೇಶಕ ಯು.ಎಸ್.ಅವಸ್ತಿ, ನಾಫೆಡ್‌ ಅಧ್ಯಕ್ಷ ಬಿಜೇಂದರ್‌ ಸಿಂಗ್‌ ಅವರು ಸಭೆಯಲ್ಲಿದ್ದರು.

           'ಮೋದಿ ಅವರ ನೇತೃತ್ವದಲ್ಲಿ ನಾವು ದೇಶದ ಸಹಕಾರ ವ್ಯವಸ್ಥೆ ಮತ್ತು ಸಹಕಾರ ಸಂಘಗಳನ್ನು ಬಲಪಡಿಸಲು ಒತ್ತು ನೀಡಲಿದ್ದೇವೆ' ಎಂದು ಅಮಿತ್‌ ಶಾ ಅವರು ಟ್ವೀಟ್ ಮಾಡಿದ್ದಾರೆ.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries