HEALTH TIPS

ಡಾಲರ್ ಕಳ್ಳಸಾಗಣೆ ಪ್ರಕರಣ; ಮುಖ್ಯಮಂತ್ರಿಯನ್ನು ಪ್ರಶ್ನಿಸುವ ಸಾಧ್ಯತೆ: ರಾಜ್ಯಪಾಲರಿಂದ ಅನುಮತಿ ಪಡೆಯಲು ಮುಂದಾದ ಕಸ್ಟಮ್ಸ್

                                       

                 ಕೊಚ್ಚಿ: ಡಾಲರ್ ಕಳ್ಳಸಾಗಣೆ ಪ್ರಕರಣದಲ್ಲಿ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರನ್ನು ಪ್ರಶ್ನಿಸುವ ಸಾಧ್ಯತೆಗಳಿವೆ. ಇದಕ್ಕಾಗಿ ತಕ್ಷಣವೇ ಕಸ್ಟಮ್ಸ್ ಗವರ್ನರ್ ಅನುಮತಿಯನ್ನು ಪಡೆಯಲಿದೆ ಎಂದು ತಿಳಿದುಬಂದಿದೆ. ಚಿನ್ನ ಕಳ್ಳಸಾಗಣೆ ಪ್ರಕರಣದ ಆರೋಪಿಯಾಗಿರುವ ಸ್ವಪ್ನಾ ಸುರೇಶ್ ಅವರು ಮುಖ್ಯಮಂತ್ರಿಗಳಿಗಾಗಿ ಡಾಲರ್ ಗಳನ್ನು ಕಳ್ಳಸಾಗಣೆ ಮಾಡಿರುವುದನ್ನು ಕಸ್ಟಮ್ಸ್ ಗೆ ಬಹಿರಂಗಪಡಿಸಿದ್ದರು. ಈ ಹಿನ್ನೆಲೆಯಲ್ಲಿ ತನುಇಖೆ ನಡೆಯುವ ಸಾಧ್ಯತೆಗಳಿವೆ. 

          ಮುಖ್ಯಮಂತ್ರಿಗಳನ್ನು ಪ್ರಶ್ನಿಸಲು ಕಾನೂನು ರೀತ್ಯಾ ರಾಜ್ಯಪಾಲರ ಅನುಮತಿ ಬೇಕು. ಈ ಕಾನೂನು ತೊಡಕನ್ನು ನಿವಾರಿಸಲು ರಾಜ್ಯಪಾಲರ ಅನುಮತಿಯನ್ನು ಪಡೆಯಲಾಗುತ್ತಿದೆ. ಕಸ್ಟಮ್ಸ್ ಕಾಯಿದೆಯ ಸೆಕ್ಷನ್ 108 ರ ಅಡಿಯಲ್ಲಿ ಕಸ್ಟಮ್ಸ್ ಕ್ರಮ ಕೈಗೊಳ್ಳಲಿದೆ. ಸೆಕ್ಷನ್ 108 ಕಸ್ಟಮ್ಸ್ ಗೆಜೆಟೆಡ್ ಶ್ರೇಣಿಯ ಯಾವುದೇ ಅಧಿಕಾರಿಯನ್ನು ಸಾಕ್ಷಿಯ ಆಧಾರದ ಮೇಲೆ ಪ್ರಶ್ನಿಸಲು ಅಧಿಕಾರ ನೀಡುತ್ತದೆ.

                 ವಿಚಾರಣೆ ವೇಳೆ ಸ್ವಪ್ನಾ ಸುರೇಶ್ ಮುಖ್ಯಮಂತ್ರಿ ವಿರುದ್ಧ ಹೇಳಿಕೆ ನೀಡಿದ್ದಾರೆ. ಯುಎಇ ಪ್ರವಾಸದ ವೇಳೆ ಅವರು ಮುಖ್ಯಮಂತ್ರಿಗಾಗಿ ವಿದೇಶಿ ಕರೆನ್ಸಿಯನ್ನು ಕಳ್ಳಸಾಗಣೆ ಮಾಡಿದ್ದಾರೆ ಎಂದು  ಬಹಿರಂಗವಾಗಿದೆ. ಮಾಜಿ ಸ್ಪೀಕರ್ ಶ್ರೀರಾಮಕೃಷ್ಣನ್ ಅವರು ವಿದೇಶಿ ಕರೆನ್ಸಿಯನ್ನು ಕಳ್ಳಸಾಗಣೆ ಮಾಡಿದ್ದಾರೆ ಎಂದು ಸ್ವಪ್ನಾ ಹೇಳಿಕೆ ನೀಡಿದ್ದಾರೆ. ಇದನ್ನು ಆಧರಿಸಿ, ಕಸ್ಟಮ್ಸ್ ಶ್ರೀರಾಮಕೃಷ್ಣನ್ ಅವರನ್ನು ಸಹ ಪ್ರಶ್ನಿಸಬಹುದು.

                  ಈ ಹಿಂದೆ, ಚಿನ್ನದ ಕಳ್ಳಸಾಗಣೆ ಪ್ರಕರಣದ ಇನ್ನೊಬ್ಬ ಆರೋಪಿ ಸರಿತ್, ಡಾಲರ್ ಹಗರಣದಲ್ಲಿ ಮುಖ್ಯಮಂತ್ರಿ ಭಾಗಿಯಾಗಿದ್ದನ್ನು ಕಸ್ಟಮ್ಸ್ ಗೆ ಬಹಿರಂಗಪಡಿಸಿದ್ದರು. ಆದರೆ ಸ್ವಪ್ನಾ ಹೇಳಿಕೆಯು ಮುಖ್ಯಮಂತ್ರಿ ವಿರುದ್ಧದ ಆರೋಪವನ್ನು ಬಲಪಡಿಸುತ್ತದೆ.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries