ತಿರುವನಂತಪುರಂ: ರಾಜ್ಯದಲ್ಲಿ ಇಂದು 20,240 ಮಂದಿ ಜನರಿಗೆ ಕೋವಿಡ್ ದೃಢಪಟ್ಟಿದೆ. ಎರ್ನಾಕುಳಂ 2572, ತ್ರಿಶೂರ್ 2451, ತಿರುವನಂತಪುರ 1884, ಕೋಝಿಕ್ಕೋಡ್ 1805, ಕೊಟ್ಟಾಯಂ 1780, ಕೊಲ್ಲಂ 1687, ಪಾಲಕ್ಕಾಡ್ 1644, ಮಲಪ್ಪುರಂ 1546, ಕಣ್ಣೂರು 1217, ಆಲಪ್ಪುಳ 1197, ಇಡುಕ್ಕಿ 825, ಪತ್ತನಂತಿಟ್ಟ 779, ವಯನಾಡ್ 566 ಮತ್ತು ಕಾಸರಗೋಡು 287Éಂಬಂತೆ ಸೋಂಕು ಬಾಧಿಸಿರುವುದು ವರದಿಯಾಗಿದೆ.
ಕಳೆದ 24 ಗಂಟೆಗಳಲ್ಲಿ 1,15,575 ಮಾದರಿಗಳನ್ನು ಪರೀಕ್ಷಿಸಲಾಗಿದೆ. ಪರೀಕ್ಷಾ ಧನಾತ್ಮಕ ದರ ಶೇ.17.51 ಆಗಿದೆ. 794 ಸ್ಥಳೀಯಾಡಳಿತ ಸಂಸ್ಥೆಗಳ ವಾರದ ಸೋಂಕಿನ ಜನಸಂಖ್ಯೆಯ ಅನುಪಾತ ಏಳಕ್ಕಿಂತ ಹೆಚ್ಚು ಹೊಂದಿವೆ. ಇವುಗಳಲ್ಲಿ 692 ವಾರ್ಡ್ ಗಳು ನಗರ ಪ್ರದೇಶಗಳಲ್ಲಿ ಮತ್ತು 3416 ವಾರ್ಡ್ ಗಳು ಗ್ರಾಮೀಣ ಪ್ರದೇಶದಲ್ಲಿವೆ.
ಪ್ರಸ್ತುತ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ 6,03,315 ಮಂದಿ ಕಣ್ಗಾವಲಿನಲ್ಲಿ ಇದ್ದಾರೆ. ಈ ಪೈಕಿ 5,72,761 ಮಂದಿ ಜನರು ಮನೆ / ಸಾಂಸ್ಥಿಕ ಕ್ವಾರಂಟೈನ್ನಲ್ಲಿದ್ದಾರೆ ಮತ್ತು 30,554 ಮಂದಿ ಆಸ್ಪತ್ರೆಗಳಲ್ಲಿ ಇದ್ದಾರೆ. ಒಟ್ಟು 1993 ಮಂದಿ ಜನರನ್ನು ಹೊಸದಾಗಿ ಆಸ್ಪತ್ರೆಗೆ ಸೇರಿಸಲಾಗಿದೆ.
ಪ್ರಸ್ತುತ, 2,22,255 ಕೋವಿಡ್ ಪ್ರಕರಣಗಳಲ್ಲಿ ಕೇವಲ 12.9 ಪ್ರತಿಶತದಷ್ಟು ಜನರು ಮಾತ್ರ ಆಸ್ಪತ್ರೆ / ಸ್ಥಳೀಯ ಆಸ್ಪತ್ರೆಗಳಿಗೆ ದಾಖಲಾಗಿದ್ದಾರೆ. ಕಳೆದ 24 ಗಂಟೆಗಳಲ್ಲಿ 67 ಮಂದಿ ಮೃತಪಟ್ಟಿದ್ದಾರೆ. ಒಟ್ಟು ಸಾವಿನ ಸಂಖ್ಯೆ 22,551 ಕ್ಕೆ ಏರಿಕೆಯಾಗಿದೆ.
ಇಂದು, ಸೋಂಕು ಪತ್ತೆಯಾದವರಲ್ಲಿ 114 ಮಂದಿ ಹೊರ ರಾಜ್ಯದವರು. 19,251 ಮಂದಿ ಜನರು ಸಂಪರ್ಕದ ಮೂಲಕ ಸೋಂಕಿಗೆ ಒಳಗಾಗಿದ್ದಾರೆ. 774 ಮಂದಿಯ ಸಂಪರ್ಕ ಮೂಲಗಳು ಸ್ಪಷ್ಟವಾಗಿಲ್ಲ. 101 ಮಂದಿ ಆರೋಗ್ಯ ಕಾರ್ಯಕರ್ತರಿಗೆ ಸೋಂಕು ದೃಢಪಡಿಸಲಾಗಿದೆ.
ಒಟ್ಟು 29,710 ಮಂದಿ ಜನರಿಗೆ ರೋಗನಿರ್ಣಯ ಮತ್ತು ಚಿಕಿತ್ಸೆ ನೀಡಲಾಗಿದ್ದು ಚೇತರಿಸಿಕೊಂಡಿದ್ದಾರೆ. ತಿರುವನಂತಪುರ 2618, ಕೊಲ್ಲಂ 3039, ಪತ್ತನಂತಿಟ್ಟ 1338, ಅಲಪ್ಪುಳ 1853, ಕೊಟ್ಟಾಯಂ 1611, ಇಡುಕ್ಕಿ 1110, ಎರ್ನಾಕುಳಂ 3773, ತ್ರಿಶೂರ್ 2845, ಪಾಲಕ್ಕಾಡ್ 1961, ಮಲಪ್ಪುರಂ 3092, ಕೋಝಿಕ್ಕೋಡ್ 3241, ವಯನಾಡ್ 1114, ಕಣ್ಣೂರು 1592 ಮತ್ತು ಕಾಸರಗೋಡು 523 ಎಂಬಂತೆ ಗುಣಮುಖರಾಗಿದ್ದಾರೆ. ಇದರೊಂದಿಗೆ 2,22,255 ಮಂದಿ ಜನರಿಗೆ ಸೋಂಕು ಇರುವುದು ಪತ್ತೆಯಾಗಿದ್ದು, ಅವರು ಇನ್ನೂ ಚಿಕಿತ್ಸೆ ಪಡೆಯುತ್ತಿದ್ದಾರೆ. ಇಲ್ಲಿಯವರೆಗೆ 41,30,065 ಮಂದಿ ಜನರನ್ನು ಕೋವಿಡ್ನಿಂದ ಮುಕ್ತಗೊಳಿಸಲಾಗಿದೆ.


