ಪಾಟ್ನಾ: ರಾಷ್ಟ್ರೀಯ ಸ್ವಯಂಸೇವಕ ಸಂಘದ (ಆರ್ಎಸ್ಎಸ್) ಮುಖ್ಯಸ್ಥ ಮೋಹನ್ ಭಾಗವತ್ ಅವರು ಗುರುವಾರ ರಾಷ್ಟ್ರೀಯ ಚಿಂತಕರಿಗಾಗಿ ಅಭಿವೃದ್ಧಿಪಡಿಸಿದ ಮೊಬೈಲ್ ಅಪ್ಲಿಕೇಷನ್ ಅನ್ನು ಗುರುವಾರ ಬಿಡುಗಡೆಗೊಳಿಸಿದರು.
ಬಿಹಾರ ರಾಜಧಾನಿಗೆ ಒಂದು ದಿನದ ಪ್ರವಾಸ ಕೈಗೊಂಡಿರುವ ಭಾಗವತ್, 'ಆಡಿಯೊ ಕುಂಭ್' ಎಂಬ ಆಯಪ್ ಬಿಡುಗಡೆ ಮಾಡಿದ್ದಾರೆ.
ಮೊಬೈಲ್ ಸ್ನೇಹಿ ನೂತನ ಆಯಪ್ನಿಂದ ರಾಷ್ಟ್ರೀಯ ಚಿಂತನೆಯನ್ನು ಬಹು ದೂರ ಹರಡಲು ನೆರವಾಗಲಿದೆ ಎಂದು ಮೋಹನ್ ಭಾಗವತ್ ಶ್ಲಾಘಿಸಿದ್ದಾರೆ.
ನೂತನ ಆಯಪ್ ಅಸಂಖ್ಯಾತ ಆಡಿಯೊ ಪುಸ್ತಕ ಹಾಗೂ ಪಾಡ್ಕಾಸ್ಟ್ಗಳನ್ನು ಒಳಗೊಂಡಿರಲಿವೆ.
ಏತನ್ಮಧ್ಯೆ ಸಂಘ ಪರಿವಾರದ ಹಿರಿಯ ಕಾರ್ಯಕರ್ತರು ಮೋಹನ್ ಭಾಗವತ್ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದ್ದಾರೆ.