HEALTH TIPS

ಕಾರ್ಯಾಚರಣೆ ಸನ್ನದ್ಧತೆ ವೃದ್ಧಿಗೆ ನಿರ್ಣಾಯಕ ವಿಶ್ಲೇಷಣೆ ಅಗತ್ಯ: ಬದೌರಿಯಾ

               ನವದೆಹಲಿ: 'ಕಾರ್ಯಾಚರಣೆ ಸನ್ನದ್ಧತೆಯನ್ನು ಹೆಚ್ಚಿಸಲು ನಿರ್ಣಾಯಕ ವಿಶ್ಲೇಷಣೆಯ ಅವಶ್ಯಕತೆಯಿದೆ. ಜತೆಗೆ, ಅಭ್ಯಾಸಗಳ ನಿರ್ವಹಣೆ ಮತ್ತು ದೃಢವಾದ ದೈಹಿಕ ಹಾಗೂ ಸೈಬರ್‌ ಭದ್ರತೆಯ ಬಗ್ಗೆ ಗಮನವಹಿಸಬೇಕು' ಎಂದು ವಾಯುಪಡೆ ಮುಖ್ಯಸ್ಥ ಆರ್‌.ಕೆ.ಎಸ್‌ ಬದೌರಿಯಾ ಹೇಳಿದರು.

            ಉತ್ತರ ಪ್ರದೇಶದ ಅಲಹಾಬಾದ್‌ನಲ್ಲಿರುವ ಭಾರತೀಯ ವಾಯುಪಡೆಯ(ಐಎಎಫ್‌) ಸೆಂಟ್ರಲ್‌ ಏರ್‌ ಕಮಾಂಡ್‌ನಲ್ಲಿ ನಡೆದ ಸಮ್ಮೇಳನದಲ್ಲಿ ಅವರು ಮಾತನಾಡಿದರು.

           ಎಲ್ಲಾ ವಿಭಾಗಗಳು ಶಸ್ತ್ರಾಸ್ತ್ರ ವ್ಯವಸ್ಥೆ ಮತ್ತು ಸ್ವತ್ತುಗಳ ಸನ್ನದ್ಧತೆಯನ್ನು ಅತ್ಯುನ್ನತ ಮಟ್ಟದಲ್ಲಿ ಇರಿಸಬೇಕೆಂದು ಬದೌರಿಯಾ ನಿರ್ದೇಶನ ನೀಡಿರುವುದಾಗಿ ಐಎಎಫ್‌ ಹೇಳಿಕೆ ಬಿಡುಗಡೆ ಮಾಡಿದೆ.

ಐಎಎಫ್‌ನ ಯುದ್ಧ ಸಾಮರ್ಥ್ಯವನ್ನು ನವೀನತೆ, ಸ್ವಾವಲಂಬನೆ ಮೂಲಕ ಹೆಚ್ಚಿಸುವ ಅಗತ್ಯವಿದೆ ಎಂದು ಅವರು ಹೇಳಿದರು.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries