HEALTH TIPS

ಜೆರುಸಲೆಂನಲ್ಲಿ 12ನೇ ಶತಮಾನದ ಭಾರತೀಯ ಸೂಫಿ ಸಂತನ ಪವಿತ್ರ ಸ್ಥಳಕ್ಕೆ ಜೈಶಂಕರ್ ಭೇಟಿ

                    ಜೆರುಸಲೆಂಇಸ್ರೇಲ್ ಭೇಟಿ ಸಂದರ್ಭ ಭಾರತೀಯ ವಿದೇಶಾಂಗ ಸಚಿವ ಎಸ್. ಜೈಶಂಕರ್ ಅವರು ಜೆರುಸಲೆಂನಲ್ಲಿ ನೆಲೆಗೊಂಡ ಪ್ರಾಚೀನ ಭಾರತೀಯ ಚಿಕಿತ್ಸಾ ಕೇಂದ್ರಕ್ಕೆ ಭೇಟಿ ನೀಡಿದ್ದಾರೆ.

              ಆ ಚಿಕಿತ್ಸಾ ಕೇಂದ್ರದಲ್ಲಿ ಫಲಕವೊಂದನ್ನು ಜೈಶಂಕರ್ ಅವರು ಉದ್ಘಾಟಿಸಿದ್ದಾರೆ. ಅದರಲ್ಲಿ 12ನೇ ಶತಮಾನದಲ್ಲಿ ನಿರ್ಮಾಣಗೊಂಡ ಭಾರತೀಯ ಚಿಕಿತ್ಸಾ ಕೇಂದ್ರ, ಭಾರತ ವಿದೇಶಾಂಗ ಸಚಿವಾಲಯದಿಂದ ಅನುದಾನಿತ ಎಂದು ಬರೆಯಲಾಗಿದೆ.

                ಈ ಚಿಕಿತ್ಸಾ ಕೇಂದ್ರದ ಹಿನ್ನೆಲೆ ಬಹಳ ಸ್ವಾರಸ್ಯಕರವಾಗಿದೆ. 12ನೇ ಶತಮಾನದಲ್ಲಿ ಭಾರತದ ಸೂಫಿ ಸಂತನೊಬ್ಬ ಪವಿತ್ರ ನಗರಿ ಜೆರುಸಲಂಗೆ ಬಂದಿದ್ದ. ಆತನ ಹೆಸರು ಬಾಬಾ ಫರೀದ್. ಆ ಸಂದರ್ಭದಲ್ಲಿ ಆತ ಅಲ್ಲಿನ ಕಲ್ಲು ಬೆಂಚಿನ ಮೇಲೆ 40 ದಿನಗಳ ಕಾಲ ಧ್ಯಾನ ಮಾಡಿದ್ದ ಎನ್ನುತ್ತಾರೆ. ಅಂದಿನಿಂದ ಮೆಕ್ಕಾಗೆ ಭೇಟಿ ನೀಡುವ ಭಾರತೀಯ ಭಕ್ತಾದಿಗಳು ಜೆರುಸಲೆಂನ ಈ ಸ್ಥಳಕ್ಕೆ ಬಂದು ಭೇಟಿ ನೀಡುವ ಪರಿಪಾಠ ಪ್ರಾರಂಭವಾಯಿತು.

             ಈ ಸ್ಥಳವೇ ಚಿಕಿತ್ಸಾ ಕೇಂದ್ರವಾಗಿ ಮಾರ್ಪಾಡಾಗಿದೆ. ಎಂಥ ಗಂಭೀರ ಆರೋಗ್ಯ ಸಮಸ್ಯೆಯಿದ್ದರೂ ಇಲ್ಲಿ ಪರಿಹಾರವಾಗುತ್ತದೆ ಎನ್ನುವ ನಂಬಿಕೆ ಭಕ್ತಾದಿಗಳದ್ದು. ಈ ಸ್ಥಳವನ್ನು ಭಾರತ ಸರ್ಕಾರ ೧೯೬೦ರಿಂದಲೂ ಪೋಷಿಸಿಕೊಂಡು ಬಂದಿದೆ. ವಿಶ್ವ ಮಹಾಯುದ್ಧ ಸಮಯದಲ್ಲಿ ಬ್ರಿಟಿಷ್ ಸೇನೆಯಲ್ಲಿ ಕರ್ತವ್ಯ ನಿರ್ವಹಿಸಿದ್ದ ಭಾರತೀಯ ಸೈನಿಕರು ಇಸ್ರೇಲಿಗೆ ಬಂದಾಗ ಈ ಸ್ಥಳದಲ್ಲಿಯೇ ಆಶ್ರಯ ಪಡೆದಿದ್ದರು ಎನ್ನುವುದು ವಿಶೇಷ.

             ಬಾಬಾ ಫರೀದ್ ಸ್ಥಳಕ್ಕೆ ಭೇಟಿ ನೀಡಿದ ಜೈಶಂಕರ್ 'ಭಾರತ ಮತ್ತು ಇಸ್ರೇಲ್ ನಡುವಿನ ಸಂಬಂಧ ೧೨ನೇ ಶತಮಾನಕ್ಕೂ ಹಳೆಯದು ಎನ್ನುವುದರ ದ್ಯೋತಕ ಇದು' ಎಂದು ಬಣ್ಣಿಸಿದ್ದಾರೆ.


Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries