ಹೈದರಾಬಾದ್: ಕೋವಿಡ್-19ನಿಂದ ಮೃತಪಟ್ಟವರ ನೆನಪಿಗೆ ತೆಲಂಗಾಣದ ರಾಜಣ್ಣ-ಸಿರ್ಸಿಲಾ ಜಿಲ್ಲೆಯ ರಾಜಣ್ಣಪೇಟೆ ಹಳ್ಳಿಯಲ್ಲಿ ನಿರ್ಮಿಸಿರುವ ದೇಶದಲ್ಲಿಯೇ ಪ್ರಥಮ ಎನ್ನಲಾದ ಸ್ಮಾರಕವನ್ನು ಗುರುವಾರ ಅನಾವರಣಗೊಳಿಸಲಾಯಿತು.
ವೈದ್ಯರು ಮತ್ತು ವೃತ್ತಿಪರ ಸ್ವಯಂಸೇವಕರ ಸಮೂಹ 'ಮದದ್' ಹೆಸರಿನ ಯೋಜನೆಯಡಿ ಸ್ಮಾರಕವನ್ನು ನಿರ್ಮಿಸಿದೆ.
ದೇಶದ ಮೊದಲ ಕೋವಿಡ್ ಸಂತ್ರಸ್ತರ ಸ್ಮಾರಕ ಎಂದು ಗುರುತಿಸುವ ಇದನ್ನು 2020-21ನೇ ಸಾಲಿನಲ್ಲಿ ದೇಶದಾದ್ಯಂತ ಕೋವಿಡ್ನಿಂದ ಮೃತಪಟ್ಟವರಿಗೆ ಸಮರ್ಪಿಸಲಾಗಿದೆ.
'ಕೋವಿಡ್ ಬಿಕ್ಕಟ್ಟಿನಲ್ಲಿ ಅಗಲಿದ ಆಪ್ತರನ್ನು 'ಭಾರತವು ಮರೆಯಲು ಸಾಧ್ಯವಿಲ್ಲ' ಹಾಗೂ ಕೋವಿಡ್-19 ಸೋಂಕು ತಗುಲದಂತೆ ಜಾಗ್ರತೆವಹಿಸುವುದನ್ನು ಮರೆಯುವುದಿಲ್ಲ' ಎಂಬುದು 'ಮದದ್' ಯೋಜನೆಯ ನಂಬಿಕೆಯಾಗಿದೆ ಎಂದು ಸ್ವಯಂ ಸೇವಕರ ಗುಂಪು ಶುಕ್ರವಾರ ಹೇಳಿಕೆಯಲ್ಲಿ ತಿಳಿಸಿದೆ.