ಕಾಸರಗೋಡು: ನೇತ್ರ ತಪಾಸಣಾ ಉಚಿತ ಶಿಬಿರ ಡಿ. 5ರಂದು ಕಾಸರಗೋಡಿನ ಕೊರುವೈಲು ಶ್ರೀ ದುರ್ಗಾಪರಮೇಶ್ವರೀ ಮಂದಿರ ಸಭಾಂಗಣದಲ್ಲಿ ಜರುಗಲಿದೆ.
ಕೂಡ್ಲು ದಿ. ಸುಬ್ಬಣ್ಣ ಶೆಟ್ಟಿ ಸ್ಮರಣಾರ್ಥ ಪ್ರಸಾದ್ ನೇತ್ರಾಲಯ ಸೂಪರ್ ಸ್ಪೆಶ್ಯಾಲಿಟಿ ಐ ಹಾಸ್ಪಿಟಲ್ ಮಂಗಳೂರು, ಡಾ. ದಯಾನಂದ ಪೈ-ಪಿ. ಸತೀಶ್ ಪೈ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಶಿಬಿರ ನಡೆಯಲಿದೆ. ಬೆಳಗ್ಗೆ 9.30ರಿಂದ ಮಧ್ಯಾಹ್ನ 2ರ ವರೆಗೆ ಶಿಬಿರ ಜರುಗಲಿದೆ. ಶ್ರೀ ಮಲ್ಲಿಕಾರ್ಜುನ ಸ್ವಸಹಾಯ ಸಂಘಗಳ ಒಕ್ಕೂಟ ಅಧ್ಯಕ್ಷ ಹರೀಶ್ ಕುಮಾರ್ ಉದ್ಘಾಟಿಸುವರು. ವಕೀಲ ಕೂಡ್ಲು ಮಹಾಬಲ ಶೆಟ್ಟಿ ಅಧ್ಯಕ್ಷತೆ ವಹಿಸುವರು. ಮೊಗ್ರಾಲ್ಪುತ್ತೂರ್ ಗ್ರಾಪಂ ಸದಸ್ಯೆ ಪ್ರಮಿಳಾ ಮಜಲ್ ಅತಿಥಿಯಾಗಿ ಭಾಗವಹಿಸುವರು.