HEALTH TIPS

ಎಸ್.ಡಿ.ಪಿ.ಐಗೆ ನಿಷೇಧ ಹೇರಬೇಕು: ಹಣಕಾಸು ಮೂಲಗಳು ಮತ್ತು ಭಯೋತ್ಪಾದಕರ ನಂಟುಗಳ ಬಗ್ಗೆ ತನಿಖೆ ನಡೆಸಬೇಕು: ಅಮಿತ್ ಶಾಗೆ ಪತ್ರ ಬರೆದ ಬಿಜೆಪಿ ಮಧ್ಯಕ್ಷೇತ್ರೀಯ ವಲಯಾಧ್ಯಕ್ಷ


         ಕೊಟ್ಟಾಯಂ: ಎಸ್ ಡಿಪಿಐ ನಿಷೇಧಿಸುವಂತೆ ಕೇಂದ್ರ ಗೃಹ ಸಚಿವರಿಗೆ ಪತ್ರ ರವಾನಿಸಲಾಗಿದೆ.  ಬಿಜೆಪಿ ಮಧ್ಯಕ್ಷೇತ್ರೀಯ  ಅಧ್ಯಕ್ಷ  ಎಲ್. ಹರಿ  ಪತ್ರವನ್ನು ಕಳುಹಿಸಿದ್ದಾರೆ.ಕೇರಳದಲ್ಲಿ ಸರ್ಕಾರದ ಕುಮ್ಮಕ್ಕಿನಿಂದ ಭಯೋತ್ಪಾದಕ ಶಕ್ತಿಗಳು ಓಡಾಡುತ್ತಿವೆ.  ಕಳೆದ ಕೆಲವು ದಿನಗಳಲ್ಲಿ ಇಬ್ಬರು ಸಂಘಪರಿವಾರದ ಕಾರ್ಯಕರ್ತರನ್ನು ಬರ್ಬರವಾಗಿ ಹತ್ಯೆ ಮಾಡಲಾಗಿದ್ದು, ಈ ವಿಚಾರದಲ್ಲಿ ಕೇಂದ್ರ ಗೃಹ ಸಚಿವಾಲಯದ ಮಧ್ಯಸ್ಥಿಕೆ ಅಗತ್ಯವಾಗಿದೆ.  ಸಂಘಟನೆಯ ಹಣಕಾಸು ಮೂಲಗಳು ಮತ್ತು ಭಯೋತ್ಪಾದಕರ ನಂಟುಗಳ ಕುರಿತು ತನಿಖೆ ನಡೆಸುವಂತೆ ಪತ್ರದಲ್ಲಿ ಕೋರಲಾಗಿದೆ
         ಸಂಜಿತ್ ಹತ್ಯೆ ಹಿಂದೆ ಎಸ್ ಡಿಪಿಐ ಕೈವಾಡವಿದೆ ಎಂದು ಬಿಜೆಪಿ ಹೇಳಿತ್ತು.  ಹತ್ಯೆಯ ಹಿಂದೆ ಭಯೋತ್ಪಾದಕರ ಕೈವಾಡವಿದೆ ಎಂದು ಆರೋಪಿಸಲಾಗಿದೆ.  ಇದರ ಭಾಗವಾಗಿ ಬಿಜೆಪಿ ರಾಜ್ಯಾಧ್ಯಕ್ಷ ಕೆ.ಸುರೇಂದ್ರನ್ ಅವರು ಸಂಜಿತ್ ಹತ್ಯೆ ಪ್ರಕರಣವನ್ನು ಎನ್‌ಐಎಗೆ ವಹಿಸಬೇಕೆಂದು ರಾಜ್ಯಪಾಲರನ್ನು ಸಂಪರ್ಕಿಸಿದ್ದರು.  ಕೆ.ಸುರೇಂದ್ರನ್ ಮಾತನಾಡಿ, ಈ ಹತ್ಯೆಯನ್ನು ತರಬೇತಿ ಪಡೆದ ಉಗ್ರರು ನಡೆಸಿದ್ದು, 2020ರಿಂದ ಸಂಜಿತ್ ಹತ್ಯೆಗೆ ಸಂಚು ನಡೆದಿತ್ತು ಎಂದು ತಿಳಿದುಬಂದಿದೆ.  ಹತ್ಯೆಯ ಹಿಂದೆ ಎಸ್‌ಡಿಪಿಐ ಕ್ರಿಮಿನಲ್ ಗ್ಯಾಂಗ್‌ಗಳ ಕೈವಾಡವಿದೆ ಎಂದು ಸುರೇಂದ್ರನ್ ಆರೋಪಿಸಿದ್ದಾರೆ.
       ಇತ್ತೀಚೆಗೆ ಪಾಲಕ್ಕಾಡ್‌ನಲ್ಲಿ ಆರ್‌ಎಸ್‌ಎಸ್ ತೇನಾರಿ ಮಂಡಲದ ಬೌದ್ದಿಕ್ ಪ್ರಮುಖ್ ಸಂಜಿತ್‌ನನ್ನು ಎಸ್‌ಡಿಪಿಐ ಕಾರ್ಯಕರ್ತರು ಹತ್ಯೆಗ್ಯೆದಿದ್ದರು.  ಪತ್ನಿ ಎದುರೇ ಬರ್ಬರ ಹತ್ಯೆ ನಡೆದಿದೆ.  ಹತ್ಯೆಯ ಹಿಂದೆ ಭಯೋತ್ಪಾದಕರ ನಂಟು ಇದೆ ಎಂದು ಬಿಜೆಪಿ ಆರೋಪಿಸಿದೆ.  ಸಂಜಿತ್ ಹತ್ಯೆ ಪ್ರಕರಣವನ್ನು ಎನ್‌ಐಎಗೆ ವಹಿಸಬೇಕೆಂದು ಕೆ  ಸುರೇಂದ್ರನ್‌ ಕೋರಿದ್ದಾರೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries