HEALTH TIPS

ಸಂಜಿತ್ ಹತ್ಯೆ: ಟೈಮ್ಸ್ ಆಫ್ ಇಂಡಿಯಾದ ಎರಡು ಆವೃತ್ತಿಯಲ್ಲಿ ಪ್ರತ್ಯೇಕ ಸುದ್ದಿಗಳು: ಕಾರು ಅಪಘಾತ ಎಂದು ಬಿಂಬಿಸಿದ ತಮಿಳು ಆವೃತ್ತಿ!

   

              ಪಾಲಕ್ಕಾಡ್: ಮಂಬರನಲ್ಲಿ ಎಸ್‌ಡಿಪಿಐ ಕಾರ್ಯಕರ್ತರಿಂದ ನಿನ್ನೆ ಹತ್ಯೆಯಾದ ಆರೆಸ್ಸೆಸ್ ಕಾರ್ಯಕರ್ತ ಸಂಜಿತ್ ಹತ್ಯೆಯನ್ನು ಆಕಸ್ಮಿಕ ಸಾವು ಎಂದು ಟೈಮ್ಸ್ ಆಫ್ ಇಂಡಿಯಾ ಬಣ್ಣಿಸಿದೆ. ಟೈಮ್ಸ್ ಆಫ್ ಇಂಡಿಯಾ ತಮಿಳುನಾಡು ಮತ್ತು ಕೇರಳದ ಆವೃತ್ತಿಗಳಲ್ಲಿ ಎರಡು ರೀತಿಯಲ್ಲಿ ವರದಿ ಮಾಡಿದೆ. ಟೈಮ್ಸ್ ಆಫ್ ಇಂಡಿಯಾದ ಕ್ರಮದ ವಿರುದ್ಧ ಪ್ರತಿಭಟನೆಗಳು ಬಲವಾಗಿವೆ.

                 ಕೇರಳದ ಪತ್ರಿಕೆಗಳಲ್ಲಿ ಪಾಲಕ್ಕಾಡ್‌ನ ಆರ್‌ಎಸ್‌ಎಸ್ ಕಾರ್ಯಕರ್ತನನ್ನು ಕೊಚ್ಚಿ ಕೊಲೆ ಮಾಡಲಾಗಿದೆ ಎಂದು ಸುದ್ದಿಯಾಗಿತ್ತು. ವರದಿಗಳ ಪ್ರಕಾರ, ತನ್ನ ಪತ್ನಿಯೊಂದಿಗೆ ಬೈಕ್‌ನಲ್ಲಿ ಹೋಗುತ್ತಿದ್ದ ಆರ್‌ಎಸ್‌ಎಸ್ ಕಾರ್ಯಕರ್ತ ಸಜ್ಜಿತ್ ಅವರನ್ನು ಕಾರಿನಲ್ಲಿದ್ದ ಗುಂಪೊAದು ಚಾಕುವಿನಿಂದ ಇರಿದು ಹತ್ಯೆ ಮಾಡಿದೆ. ಇದೇ ವೇಳೆ  ಎಸ್‌ಡಿಪಿಐ ಅನ್ನು ಸುದ್ದಿಯಲ್ಲಿ ಉಲ್ಲೇಖಿಸಲಾಗಿಲ್ಲ.

                  ಆದರೆ ತಮಿಳುನಾಡು ಆವೃತ್ತಿಯಲ್ಲಿ ರಸ್ತೆ ಅಪಘಾತದಲ್ಲಿ ಆರ್‌ಎಸ್‌ಎಸ್ ಕಾರ್ಯಕರ್ತ ಸಾವನ್ನಪ್ಪಿದ ಸುದ್ದಿಯನ್ನು ನೀಡಲಾಗಿತ್ತು. ಸುದ್ದಿ ಪ್ರಕಾರ, ಪತ್ನಿಯೊಂದಿಗೆ ಬೈಕ್ ನಲ್ಲಿ ಹೋಗುತ್ತಿದ್ದಾಗ ಕಾರು ಅಪಘಾತಕ್ಕೀಡಾಗಿದ್ದು, ತಲೆಗೆ ಪೆಟ್ಟಾಗಿದ್ದು ಸಾವಿಗೆ ಕಾರಣವಾಗಿದೆ ಎಂದು ಬರೆಯಲಾಗಿದೆ. ಹತ್ಯೆಯ ಹಿಂದೆ ಎಸ್‌ಡಿಪಿಐ ಗುಂಪು ಕೈವಾಡವಿದೆ ಎಂದು ಬಿಜೆಪಿ ನಿನ್ನೆಯೇ ಆರೋಪಿಸಿತ್ತು.

             ಸುದ್ದಿ ವಿವಾದದ ನಂತರ, ಟೈಮ್ಸ್ ಆಫ್ ಇಂಡಿಯಾ ಕೂಡ ಪ್ರತಿಕ್ರಿಯೆ ನೀಡಿದ್ದು,  ಪಾಲಕ್ಕಾಡ್‌ನಿಂದ ಕಳಿಸಿದ ಸುದ್ದಿಯನ್ನೇ ನೀಡಲಾಗಿದೆ.  ಕೇರಳ ಆವೃತ್ತಿಯಲ್ಲಿ ಬಂದಿದ್ದು ಸರಿಯಾಗಿದೆ ಎಂದು ವರದಿಗಾರ ಪ್ರಭಾಕರನ್ ಸ್ಪಷ್ಟಪಡಿಸಿದ್ದಾರೆ. ಘಟನೆಯಲ್ಲಿ ಭಾಗಿಯಾಗಿರುವವರಿಂದ ವಿವರಣೆ ಕೇಳುವುದಾಗಿ ಚೆನ್ನೈ ಮೂಲದ ರೆಸಿಡೆಂಟ್ ಎಡಿಟರ್ ಅರುಣ್ ಹೇಳಿದ್ದಾರೆ.


Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries