ನವದೆಹಲಿ: 2024ರಲ್ಲಿ ಮಥುರಾದ ಶ್ರೀಕೃಷ್ಣ ಜನ್ಮಭೂಮಿ ವಿವಾದವನ್ನು ಕೈಗೆತ್ತಿಕೊಳ್ಳುವುದಾಗಿ ವಿಶ್ವ ಹಿಂದೂ ಪರಿಷದ್ (ವಿಎಚ್ಪಿ) ಭಾನುವಾರ ಹೇಳಿದೆ.
ಶ್ರೀಕೃಷ್ಣ ಜನ್ಮಭೂಮಿ ವಿಚಾರ ತಮ್ಮ ಕಾರ್ಯಸೂಚಿಯಲ್ಲಿ ಇಲ್ಲ ಎಂದು ಈ ಮೊದಲು ವಿಎಚ್ಪಿ ಹೇಳಿತ್ತು.
ಶ್ರೀಕೃಷ್ಣ ಜನ್ಮಭೂಮಿಗೆ ಹೊಂದಿಕೊಂಡತೆ ನಿರ್ಮಿಸಲಾಗಿರುವ ಶಾಹಿ ಈದ್ಗಾ ಮಸೀದಿ ಜಾಗವನ್ನು ಕೃಷ್ಣ ಮಂದಿರಕ್ಕಾಗಿ ಪಡೆಯಬೇಕೆಂಬ ಬೇಡಿಕೆಗೆ ದೇಶದ ಸಂತರ ಸಂಘಟನೆಯಾದ 'ಅಖಿಲ ಭಾರತ ಅಖಾಡ ಪರಿಷದ್' (ಎಐಎಪಿ) ಬೆಂಬಲ ನೀಡಿದೆ ಎಂದು ಅಲೋಕ್ ಕುಮಾರ್ ಹೇಳಿದ್ದಾರೆ.
'ಮಥುರಾಗೆ ತಯಾರಾಗಿ' ಎಂದು ಉತ್ತರ ಪ್ರದೇಶ ಉಪ ಮುಖ್ಯಮಂತ್ರಿ ಕೇಶವ ಪ್ರಸಾದ್ ಮೌರ್ಯ ಬಿಜೆಪಿಗೆ ಬೆಂಬಲಿಗರಿಗೆ ಕರೆ ನೀಡಿದ್ದ ಬೆನ್ನಲ್ಲೇ ವಿಎಚ್ಪಿ ಈ ಹೇಳಿಕೆ ನೀಡಿದೆ. 2024ರಲ್ಲಿ ಲೋಕಸಭೆ ಚುನಾವಣೆಗಳೂ ನಡೆಯಲಿವೆ.