HEALTH TIPS

ಪೆರಿಯ ಅವಳಿ ಕೊಲೆ ಪ್ರಕರಣದಲ್ಲಿ ಮೊದಲ ಬಂಧನ; ಶಾಖಾ ಕಾರ್ಯದರ್ಶಿ ಸೇರಿದಂತೆ ಐವರು ಸಿಪಿಎಂ ನಾಯಕರನ್ನು ಬಂಧಿಸಿದ ಸಿಬಿಐ

                                          

                 ಕಾಸರಗೋಡು:  ಪೆರಿಯ ಅವಳಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಬಿಐ ಮಹತ್ವದ ಬಂಧನವನ್ನು ದಾಖಲಿಸಿದೆ. ಸ್ಥಳೀಯ ಸಿಪಿಎಂ ಮುಖಂಡರನ್ನು ಬಂಧಿಸಲಾಗಿದೆ.  ಶಾಖಾ ಕಾರ್ಯದರ್ಶಿ ಮತ್ತು ಇತರರನ್ನು ಬಂಧಿಸಲಾಗಿದೆ. ಅವರನ್ನು ನಾಳೆ ಎರ್ನಾಕುಳಂ ಸಿಜೆಎಂ ನ್ಯಾಯಾಲಯಕ್ಕೆ ಹಾಜರುಪಡಿಸಲಾಗುವುದು.

                          ಸಿಪಿಎಂ ಕಾರ್ಯಕರ್ತರಾದ ಶಾಖೆಯ ಕಾರ್ಯದರ್ಶಿ ರಾಜು ಸುರೇಂದ್ರನ್, ಶಾಸ್ತಾ ಮಧು, ರೆಜಿ ವರ್ಗೀಸ್ ಮತ್ತು ಹರಿಪ್ರಸಾದ್ ಎಂಬವರು ಬಂಧಿತರಾದವರು. ಸಿಬಿಐ ಡಿವೈಎಸ್ಪಿ ಅನಂತಕೃಷ್ಣನ್ ನೇತೃತ್ವದ ತಂಡ ಆರೋಪಿಗಳನ್ನು ಬಂಧಿಸಿದೆ.

                     ಫೆಬ್ರವರಿ 17, 2019 ರಂದು, ಪೆರಿಯ ಕಲ್ಯಾಟ್ ನಲ್ಲಿ ಯೂತ್ ಕಾಂಗ್ರೆಸ್ ಕಾರ್ಯಕರ್ತರಾದ ಕೃಪೇಶ್ (21) ಮತ್ತು ಶರತ್ ಲಾಲ್ (24) ಕೊಲ್ಲಲ್ಪಟ್ಟರು. ವಾಹನಗಳಲ್ಲಿ ಬಂದ ಗುಂಪು ಬೈಕ್ ನಿಲ್ಲಿಸಿ ಹತ್ಯೆ ಮಾಡಿತ್ತು. ಪ್ರಕರಣದಲ್ಲಿ ಸಿಪಿಎಂ ಪ್ರದೇಶ ಮತ್ತು ಸ್ಥಳೀಯ ಕಾರ್ಯದರ್ಶಿಗಳು ಮತ್ತು ಪಕ್ಷದ ಕಾರ್ಯಕರ್ತರು ಸೇರಿದಂತೆ 14 ಆರೋಪಿಗಳಿದ್ದಾರೆ. ಇಂದು ಮಧ್ಯಾಹ್ನ ಸಿಬಿಐ ಹಿರಿಯ ಸಿಪಿಎಂ ನಾಯಕರ ವಿಚಾರಣೆ ಆರಂಭಿಸಿದೆ. ಕಾಸರಗೋಡು ಅತಿಥಿ ಗೃಹದಲ್ಲಿರುವ ಸಿಬಿಐ ಕ್ಯಾಂಪ್ ಕಚೇರಿಯಲ್ಲಿ ವಿಚಾರಣೆ ನಡೆದಿದೆ. ವಿಚಾರಣೆ ನಡೆಸಿದ ಬೆನ್ನಲ್ಲೇ ಬಂಧನವನ್ನು ದಾಖಲಿಸಿಕೊಳ್ಳಲಾಗಿದೆ.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries