HEALTH TIPS

ನ್ಯಾಯಾಲಯವು ಅಪರಾಧಿಯ ಮನಸ್ಥಿತಿಯನ್ನೂ ಗಮನಿಸಬೇಕು: ಸುಪ್ರೀಂ ಕೋರ್ಟ್‌

      ನವದೆಹಲಿ: 'ನ್ಯಾಯಾಲಯಗಳು ಕೇವಲ ಅಪರಾಧದ ಸ್ವರೂಪವನ್ನಷ್ಟೇ ಅಲ್ಲ, ಅಪರಾಧಿ ಮತ್ತು ಆತನ ಮನಸ್ಥಿತಿಯನ್ನೂ ಪರಿಗಣನೆಗೆ ತೆಗೆದುಕೊಳ್ಳಬೇಕು' ಎಂದು ಸುಪ್ರೀಂ ಕೋರ್ಟ್‌ ಹೇಳಿದೆ.

      ನ್ಯಾಯಮೂರ್ತಿ ಎಲ್‌.ನಾಗೇಶ್ವರರಾವ್‌ ನೇತೃತ್ವದ ಪೀಠವು, ಅಪರಾಧಿಯ ಸುಧಾರಣೆ ಮತ್ತು ಪುನರ್ವಸತಿ ಸಾಧ್ಯತೆಗಳನ್ನೂ ಗಮನಿಸುವುದು ನ್ಯಾಯಾಲಯಗಳ ಹೊಣೆಗಾರಿಕೆಯಾಗಿದೆ ಎಂದೂ ಅಭಿಪ್ರಾಯಪಟ್ಟಿದೆ.

      ಆಸ್ತಿ ವಿಚಾರಕ್ಕೆ ಸಂಬಂಧಿಸಿದಂತೆ ಮೂವರು ಸಂಬಂಧಿಕರ ಕೊಲೆ ಪ್ರಕರಣದಲ್ಲಿ ಅಪರಾಧಿಗೆ ವಿಧಿಸಿದ್ದ ಜೀವಾವಧಿ ಸಜೆಯನ್ನು 30 ವರ್ಷದ ಅವಧಿಯ ಸಜೆಗೆ ಪರಿವರ್ತಿಸಿದ ಪೀಠವು ಮೇಲಿನಂತೆ ಅಭಿಪ್ರಾಯಪಟ್ಟಿತು.

     ಮೇಲ್ಮನವಿದಾರ ಬಡ ಕುಟುಂಬ ಮತ್ತು ಆರ್ಥಿಕವಾಗಿ ಹಿಂದುಳಿದ ಹಿನ್ನೆಲೆ ಹೊಂದಿದ್ದು, ಅಪರಾಧ ಹಿನ್ನೆಲೆಯೂ ಇಲ್ಲ. ಇದು, ಆತನ ಮೊದಲ ಅಪರಾಧ. ಕೃತ್ಯ ಗಂಭೀರವಾಗಿದ್ದರೂ, ಕಾರಾಗೃಹ ಅಧೀಕ್ಷಕರು ಅಪರಾಧಿ ವರ್ತನೆ ಕುರಿತು ನೀಡಿರುವ ವಿವರ ತೃಪ್ತಿಕರವಾಗಿಲ್ಲ ಎಂದು ಪೀಠವು ಹೇಳಿತು.

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries