HEALTH TIPS

ಭಾರತದಲ್ಲಿ ಕೋವಿಡ್ 19 ತಡೆಯಲು ರಾತ್ರಿ ಕರ್ಫ್ಯೂ ಹೇರಿಕೆ ಅವೈಜ್ಞಾನಿಕ

            ನವದೆಹಲಿ:ಕೋವಿಡ್ 19 ಪ್ರಭೇದದ ವೈರಸ್‌ಗಳ ಹರಡುವಿಕೆಯನ್ನು ನಿಯಂತ್ರಿಸಲು ರಾತ್ರಿ ಕರ್ಫ್ಯೂಗಳನ್ನು ಹೇರುವುದರ ಹಿಂದೆ ಯಾವುದೇ ವೈಜ್ಞಾನಿಕತೆ ಇಲ್ಲವೆಂದು ವಿಶ್ವ ಆರೋಗ್ಯ ಸಂಸ್ಥೆಯ ಮುಖ್ಯ ವಿಜ್ಞಾನಿ ಸೌಮ್ಯಾ ಸ್ವಾಮಿನಾಥನ್ ಪ್ರತಿಪಾದಿಸಿದ್ದಾರೆ.

            ಕೊರೋನ ಸಾಂಕ್ರಾಮಿಕದ ಹರಡುವಿಕೆಗೆ ಕಡಿವಾಣ ಹಾಕಲು ಭಾರತದಂತಹ ರಾಷ್ಟ್ರಗಳು ವಿಜ್ಞಾನ ಆಧಾರಿತವಾದ ನೀತಿಗಳನ್ನು ರೂಪಿಸಬೇಕೆಂದು ಸೌಮ್ಯಾ ಅವರು ಟಿವಿ ಮಾಧ್ಯಮಕ್ಕೆ ನೀಡಿದ ಸಂದರ್ಶನದಲ್ಲಿ ತಿಳಿಸಿದ್ದಾರೆ. ರಾತ್ರಿ ಕರ್ಫ್ಯೂ ಹೇರಿಕೆಯ ಹಿಂದೆ ಯಾವುದೇ ವೈಜ್ಞಾನಿಕತೆ ಇಲ್ಲ. ಅದರ ಬದಲಿಗೆ ಪುರಾವೆಗಳನ್ನು ಆಧರಿಸಿದ ಕ್ರಮಗಳನ್ನು ಕೈಗೊಳ್ಳಬೇಕಾಗಿದೆ. ಸಾರ್ವಜನಿಕ ಆರೋಗ್ಯ ಪಾಲನೆಗೆ ಸಂಬಂಧಿಸಿದಂತೆ ವಿಶ್ವ ಆರೋಗ್ಯ ಸಂಸ್ಥೆಯು ಸಮಗ್ರವಾದ ಪಟ್ಟಿಯೊಂದನ್ನು ರೂಪಿಸಿದೆ'' ಎಂದು ಅವರು ಸಿಎನ್‌ಬಿಸಿ-ಟಿವಿ18ಗೆ ನೀಡಿದ ಸಂದರ್ಶನದಲ್ಲಿ ತಿಳಿಸಿದ್ದಾರೆ.

           ''ಭಾರತದಲ್ಲಿ ನಾವು ಒಮೈಕ್ರಾನ್ ಪ್ರಕರಣಗಳ ಮಹಾಪೂರವನ್ನೇ ಕಾಣುವ ನಿರೀಕ್ಷೆಯಿದೆ. ಕೆಲವು ನಗರಗಳಲ್ಲಿ ಅದು ಈಗ ಕೇವಲ ಆರಂಭವಷ್ಟೇ ಆಗಿದೆ ಮತ್ತು ಮುಂದಿನ ದಿನಗಳಲ್ಲಿ ಬಹಳಷ್ಟು ಸಂಖ್ಯೆಯ ಜನರಿಗೆ ಸೋಂಕು ತಗಲಲಿದೆ'' ಎಂದರ ಸೌಮ್ಯಾ ತಿಳಿಸಿದರು.

               ಭಾರತದಲ್ಲಿ ಕಳೆದ 24 ತಾಸುಗಳಲ್ಲಿ 309 ಒಮೈಕ್ರಾನ್ ಸೋಂಕಿನ ಹೊಸ ಪ್ರಕರಣಗಳು ವರದಿಯಾಗಿದೆ. ಇದರೊಂದಿಗೆ ಶುಕ್ರವಾರ ದೇಶದಲ್ಲಿ ಒಮೈಕ್ರಾನ್ ಸೋಂಕಿನ ಪ್ರಕರಣಗಳ ಸಂಖ್ಯೆ 1270ಕ್ಕೆ ಏರಿದ್ದು, 374 ಮಂದಿ ಬಿಡುಗಡೆಗೊಂಡಿದ್ದಾರೆ.


Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries