ಕೊಯಮತ್ತೂರು: ಮಕ್ಕಳಿಗೆ ಪಾಠ ಕಲಿಸಲು ವಿನೂತನ ಹಾಗೂ ಕ್ರಿಯಾಶೀಲ ಚಟುವಟಿಕೆಗಳನ್ನು ಆವಿಷ್ಕರಿಸಿದ ಶಿಕ್ಷಕಿ ಕೊಯಮತ್ತೂರಿನ ಸರ್ಕಾರಿ ಶಾಲಾ ಶಿಕ್ಷಕಿ ಜೆ. ಯುವರಾಣಿ ಅವರಿಗೆ ಕೇಂದ್ರ ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವಾಲಯ ನೀಡುವ 2021ನೇ ಸಾಲಿನ ಪ್ರತಿಷ್ಟಿತ ಸಾರಾಭಾಯಿ ರಾಷ್ಟ್ರೀಯ ಪುರಸ್ಕಾರ ಲಭಿಸಿದೆ.
ಜೆ. ಯುವರಾಣಿ ಅವರು ಬೊಮ್ಮನಂಪಾಳ್ಯಂ ಗ್ರಾಮದಲ್ಲಿ ಮಿಡಲ್ ಸ್ಕೂಲ್ ಶಿಕ್ಷಕಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಕಲಿಕೆಯ ಜೊತೆಗೆ ಕಲೆಯನ್ನು ಮಿಳಿತಗೊಳಿಸುವುದು ಅವರ ಪಾಠ ಮಾಡುವ ಶೈಲಿಯಾಗಿದೆ.
ಯುವರಾಣಿ ಅವರು ಪಠ್ಯವನ್ನು ಅನಿಮೇಟೆಡ್ ವಿಡಿಯೋಗಳನ್ನಾಗಿ ಪರಿವರ್ತಿಸಿ ಅವುಗಳ ಮೂಲಕ ಮಕ್ಕಳಿಗೆ ಆಸಕ್ತಿದಾಯಕವಾಗಿ ಪಾಠ ಮಾಡುತ್ತಾ ಬಂದಿದ್ದಾರೆ. ಅದಕ್ಕಾಗಿ ಅವರು ಇದುವರೆಗೂ ೨೫೦ ಅನಿಮೇಟೆಡ್ ವಿಡಿಯೋಗಳನ್ನು ಸೃಷ್ಟಿಸಿದ್ದಾರೆ.
ಮಕ್ಕಳಿಗೆ ಆಟ ಎಂದರೆ ಇಷ್ಟ ಹೀಗಾಗಿ ಅವರಿಗೆ ಪಾಠ ಮಾಡಬೇಕೆಂದರೆ ಅವರ ನಿಯಮಗಳ ಪ್ರಕಾರವೇ ಹೋದರೆ ಚೆನ್ನ. ಹೀಗಾಗಿ ತಾವು ಈ ವಿನೂತನ ಪಾಠ ಮಾಡುವ ಶೈಲಿ ಅಳವಡಿಸಿಕೊಂಡಿದ್ದಾಗಿ ಯುವರಾಣಿ ಹೇಳುತ್ತಾರೆ. ಫೆ. 28ರಂದು ಅವರಿಗೆ ಪ್ರಶಸ್ತಿ ಪ್ರದಾನ ಮಾಡಲಾಗುತ್ತದೆ.