ತಿರುವನಂತಪುರ; ಲೋಕಾಯುಕ್ತ ತಿದ್ದುಪಡಿ ಕುರಿತು ರಾಜ್ಯಪಾಲರಿಗೆ ಪ್ರತಿಕ್ರಿಯೆ ನೀಡಿದ ಸರ್ಕಾರ ಕಾನೂನಿನಲ್ಲಿ ಅಸಂವಿಧಾನಿಕ ಸೆಕ್ಷನ್ ಇದೆ ಎಂದು ಸ್ಪಷ್ಟಪಡಿಸಿದೆ. ಕಾಯಿದೆಯ 14ನೇ ವಿಧಿ ಅಸಂವಿಧಾನಿಕವಾಗಿದೆ. ಸುಗ್ರೀವಾಜ್ಞೆಗೆ ತಿದ್ದುಪಡಿ ತರಲು ರಾಷ್ಟ್ರಪತಿಗಳ ಅನುಮೋದನೆ ಪಡೆಯುವುದಿಲ್ಲ ಎಂದು ಸರ್ಕಾರ ಹೇಳಿದೆ. ಎಜಿ ಅವರ ಕಾನೂನು ಸಲಹೆಯನ್ನೂ ಸರ್ಕಾರ ರಾಜ್ಯಪಾಲರಿಗೆ ತಿಳಿಸಿದೆ.
ಉನ್ನತ ಶಿಕ್ಷಣ ಸಚಿವೆ ಆರ್.ಬಿಂದು ವಿರುದ್ದ ಲೋಕಾಯುಕ್ತರು ಈ ತಿಂಗಳ ಆರಂಭದಲ್ಲಿ ಅರ್ಜಿಯ ತೀರ್ಪನ್ನು ಏಪ್ರಿಲ್ 4 ಕ್ಕೆ ಮುಂದೂಡಿದ್ದರು. ಪ್ರತಿಪಕ್ಷದ ಮಾಜಿ ನಾಯಕ ರಮೇಶ್ ಚೆನ್ನಿತ್ತಲ ಅವರು ಸಲ್ಲಿಸಿರುವ ದೂರು ಲೋಕಾಯುಕ್ತ ವ್ಯಾಪ್ತಿಗೆ ಒಳಪಡುವುದಿಲ್ಲ ಎಂದು ನ್ಯಾಯಮೂರ್ತಿ ಸಿರಿಯಾಕ್ ಜೋಸೆಫ್ ಈ ಹಿಂದೆ ಹೇಳಿದ್ದರು. ಕುಲಪತಿ ಮತ್ತು ಪೆÇ್ರ ವೈಸ್ ಚಾನ್ಸಲರ್ ಲೋಕಾಯುಕ್ತ ವ್ಯಾಪ್ತಿಗೆ ಬರುವುದಿಲ್ಲ ಎಂದು ಲೋಕಾಯುಕ್ತರು ಸೂಚಿಸಿದರು.
ಸಚಿವೆ ಬಿಂದು ಅವರ ಪತ್ರದಲ್ಲಿ ಎಲ್ಲಿಯೂ ಶಿಫಾರಸು ಮಾಡಿಲ್ಲ. ಸೂಚನೆ ನೀಡುವುದೊಂದೇ ಮಾಡಿದ್ದು. ಎಜಿ ಸಲಹೆ ಮೇರೆಗೆ ಮರುನೇಮಕಕ್ಕೆ ಕೋರಲಾಗಿದೆ. ಹಾಗಾಗಿ ಪತ್ರವನ್ನು ತಿರಸ್ಕರಿಸಬಹುದು ಅಥವಾ ಸ್ವೀಕರಿಸಬಹುದು ಎಂದು ಲೋಕಾಯುಕ್ತರು ಸ್ಪಷ್ಟಪಡಿಸಿದ್ದಾರೆ.