ನವದೆಹಲಿ: ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್ ಮಂಡಿಸಿರುವ 2022-23 ನೇ ಸಾಲಿನ ಬಜೆಟ್ ವೇತನ ಪಡೆಯುವ ನೌಕರರು, ಮಧ್ಯಮ ವರ್ಗದವರಿಗೆ ನಿರಾಶಾದಾಯಕ ಬಜೆಟ್ ಎಂದು ಮೋದಿ ಸರ್ಕಾರದ ವಿರುದ್ಧ ಕಾಂಗ್ರೆಸ್ ವಾಗ್ದಾಳಿ ನಡೆಸಿದೆ.
ಮಧ್ಯಮ ವರ್ಗದವರಿಗೆ ಯಾವುದೇ ಪರಿಹಾರ ಕ್ರಮಗಳನ್ನೂ ಸರ್ಕಾರ ಬಜೆಟ್ ನಲ್ಲಿ ಘೋಷಿಸಿಲ್ಲ. ಈ ವರ್ಗದ ಜನ, ಹೆಚ್ಚು ಹಣದುಬ್ಬರ, ಸಾಂಕ್ರಾಮಿಕದ ಕಾರಣ ವೇತನ ಕಡಿತದಿಂದ ಬಳಲಿದ್ದಾರೆ, ಈ ವರ್ಗದ ಮಂದಿ ಬಜೆಟ್ ನಲ್ಲಿ ಪರಿಹಾರವನ್ನು ನಿರೀಕ್ಷಿಸುತ್ತಿದ್ದರು.
ನೇರ ತೆರಿಗೆ ಕ್ರಮಗಳಲ್ಲಿ ಕೇಂದ್ರ ಸರ್ಕಾರ, ವಿತ್ತ ಸಚಿವರು ನಿರಾಶೆ ಮೂಡಿಸಿದ್ದಾರೆ ಎಂದು ಕಾಂಗ್ರೆಸ್ ಪಕ್ಷದ ವಕ್ತಾರ, ನಾಯಕ ರಣ್ದೀಪ್ ಸುರ್ಜೆವಾಲ ಟ್ವೀಟ್ ಮಾಡಿದ್ದಾರೆ. ಈ ಬಜೆಟ್ ಶೂನ್ಯ ಬಜೆಟ್ ಆಗಿದೆ ಎಂದು ಸುರ್ಜೆವಾಲ ವಾಗ್ದಾಳಿ ನಡೆಸಿದ್ದಾರೆ.