HEALTH TIPS

ಕೃಷಿನಾಶವಾದ ಸ್ಥಳಕ್ಕೆ ಸಾಂತ್ವನ ಭೇಟಿ

  

               ಮುಳ್ಳೇರಿಯ: ಮುಳಿಯಾರು ಗ್ರಾಮದ   ಚೆಮ್ಬಲಾಂಗುಯಿ, ಮುನಿಯಂಗಳ, ಕೊಳಂಬೆ, ಅತ್ತಿಕ್ಕಯೆ, ನೀರಳಪ್ಪು  ಮೊದಲಾದ ಸ್ಥಳಗಳಲ್ಲಿ ಕೃಷಿ ಕ್ಷೇತ್ರಗಳಿಗೆ ಆನೆಗಳು ನುಗ್ಗಿ ವಿಪರೀತ ನಾಶನಷ್ಟಗಳನ್ನುಂಟುಮಾಡುತ್ತಾ ಇವೆ.  ಕೆಲವು ಸಮಯಗಳಿಂದ ಈ ಪರಿಸರದಲ್ಲಿ ನಿರಂತರವಾಗಿ ಆನೆಗಳ ಉಪಟಳ  ಸಾಗುತ್ತಾ ಇದ್ದು ಪರಿಸ್ಥಿತಿ ದುರಂತವಾಗಿದೆ. 

             ಮುನಿಯಂಗಳದ ಸಮೀಪ  ಚೊಟ್ಟೆ ಕೊಳಂಬೆ ಶಂಕರ ಭಟ್, ಅತ್ತಿಕ್ಕಯೆ ಶ್ರೀಕೃಷ್ಣ ಭಟ್, ಮುನಿಯಂಗಳ ರಾಧಾಕೃಷ್ಣ ಭಟ್,  ಕುಂಜಿರಾಮನ್ ನಾಯರ್, ನಾರಾಯಣನ್ ನಾಯರ್   ಮತ್ತು ಆ ಪರಿಸರದ ಹಲವು ಕೃಷಿಕ ಬಾಂಧವರ ಸ್ಥಳಗಳಿಗೆ ಆನೆಗಳು ಹಾವಳಿ ಮಾಡುತ್ತಾ ಇದ್ದು ಸ್ಥಿತಿ ಗಂಭೀರವಾಗಿದೆ.    
           ಮುಳ್ಳೇರಿಯ ಹವ್ಯಕ ಮಂಡಲ ಚಂದ್ರಗಿರಿ ವಲಯದ ಸಹಾಯ ಪ್ರಧಾನ ಡಾ ಶ್ರೀಕೃಷ್ಣ ರಾಜ ಕಾಟಿಪಳ್ಳ ಅವರ ನೇತೃತ್ವದಲ್ಲಿ ಈ ಮನೆಗಳನ್ನು ಭೇಟಿ ಮಾಡಿ ಹಾಳುಗೆಡವಿದ ಸ್ಥಳಗಳನ್ನು ಸಂದರ್ಶನ ಮಾಡಲಾಯಿತು.  ಈ ಮನೆಯವರ ಸ್ಥಳಗಳನ್ನು ಸಂದರ್ಶಿಸಿ ಮನೆಯವರನ್ನು ಕಂಡು ಸಾಂತ್ವನ ಮಾಡಲಾಯಿತು.

               ತಂಡದಲ್ಲಿ ಚಂದ್ರಗಿರಿ ವಲಯ ಅಧ್ಯಕ್ಷ ಸುಬ್ರಹ್ಮಣ್ಯ ಭಟ್  ಮೀನಗದ್ದೆ, ಮಂಡಲ ಮಾತೃ ಪ್ರಧಾನೆ ಗೀತಾ ಲಕ್ಷ್ಮಿ ಅನಘ,  ಮಂಡಲ ಶಿಷ್ಯ ಮಾಧ್ಯಮ ಪ್ರಧಾನ ಗೋವಿಂದ ಬಳ್ಳಮೂಲೆ  ಇವರುಗಳು ಜೊತೆಗಿದ್ದರು.
       ಸಮಸ್ಯೆಯ ಪರಿಹಾರಕ್ಕೆ ಅಧಿಕೃತರಿಗೆ ಈ ವಿಚಾರವನ್ನು ತಿಳಿಸಿ ಸಮಸ್ಯೆ ಬಗೆಹರಿಸುವುದಕ್ಕೆ ಸಾಮಾಲೋಚಿಸಲಾಯಿತು.



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries