HEALTH TIPS

ತಲಶ್ಶೇರಿಯಲ್ಲಿ ಬಿಜೆಪಿ ಕಾರ್ಯಕರ್ತರ ಮನೆಗಳ ಮೇಲೆ ಪೆÇಲೀಸರಿಂದ ದಾಳಿ: ಬಿಜೆಪಿ ಆರೋಪ ವೃದ್ದೆ ಆಸ್ಪತ್ರೆಗೆ ದಾಖಲು

                                 

                      ತಲಶ್ಶೇರಿ: ಸಿಪಿಎಂ ಕಾರ್ಯಕರ್ತ ಪುನ್ನೋಲ್ ಹರಿದಾಸ್ ಹತ್ಯೆಯ ನಂತರ ಪೆÇಲೀಸರು ಆ ಪ್ರದೇಶದ ಬಿಜೆಪಿ ಕಾರ್ಯಕರ್ತರ ಮನೆಗಳ ಮೇಲೆ ದಾಳಿ ನಡೆಸಿದ್ದಾರೆ. ಪೆÇಲೀಸರು ಹಿಂಸಾಚಾರಕ್ಕೆ ಸಾಕ್ಷಿಯಾದ ಕೊಡಿಯೇರಿ ಮಡಪ್ಪೆಡಿಕಾದ ಚೆಲ್ಲತ್ ಮನೆಯ ಸತಿ ಪ್ರಜ್ಞಾಹೀನರಾದರು. 66 ವರ್ಷದ ಅವರನ್ನು ತಲಶ್ಶೇರಿ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ.

                ಸತಿ ಹೇಳುವಂತೆ ತಪಾಸಣೆಗೆ ಬಂದ ಪೆÇಲೀಸರು ಮನೆಗೆ ನುಗ್ಗಿ ಸಾಮಾನುಗಳನ್ನು ಎಸೆದಿದ್ದಾರೆ. ಮನೆಯಲ್ಲಿ ಒಂಟಿಯಾಗಿದ್ದ ಸತಿಯನ್ನು ಪೆÇಲೀಸರು ಅವಾಚ್ಯ ಶಬ್ದಗಳಿಂದ ನಿಂದಿಸಿ ಆಕೆಯ ಸೆಲ್ ಫೆÇೀನ್ ಕಿತ್ತುಕೊಂಡಿದ್ದಾರೆ. ಪೆÇಲೀಸ್ ದೌರ್ಜನ್ಯದ ವೇಳೆ ವೃದ್ಧೆ ಕೋಮಾಕ್ಕೆ ಜಾರಿದರು ಎನ್ನಲಾಗಿದೆ. 

         ಸಿಪಿಎಂ ನಿಯಂತ್ರಿತ ಪುನ್ನೋಲ್ ಸಹಕಾರಿ ಬ್ಯಾಂಕ್‍ನ ಉದ್ಯೋಗಿ ಮತ್ತು ಸಿಪಿಎಂ ಕಾರ್ಯಕರ್ತ ಶಾಜಿ ಮತ್ತು ಇತರ ಸಿಪಿಎಂ ಕಾರ್ಯಕರ್ತರು ಪೆÇಲೀಸರೊಂದಿಗೆ ಮನೆಗೆ ಬಂದಿದ್ದರು ಎಂದವರು ಹೇಳಿದ್ದಾರೆ. 

                      ಬಿಜೆಪಿ ಕಾರ್ಯಕರ್ತರನ್ನು ಹತ್ಯೆಗೈಯಲು ಪೆÇಲೀಸರು ಸಂಚು ರೂಪಿಸಿದ್ದಾರೆ ಎಂದು ಬಿಜೆಪಿ ಆರೋಪಿಸಿದೆ. ರಾತ್ರಿಯೂ ಸೇರಿದಂತೆ ಮನೆಗಳ ಮೇಲೆ ಪೆÇಲೀಸರು ದಾಳಿ ನಡೆಸಿ, ತಪಾಸಣೆ ಹೆಸರಿನಲ್ಲಿ ಮಹಿಳೆಯರನ್ನು ಬೆದರಿಸುತ್ತಿದ್ದಾರೆ ಎಂದು ಬಿಜೆಪಿ ಆರೋಪಿಸಿದೆ. ಗೃಹ ಇಲಾಖೆ ಸೂಚನೆ ಮೇರೆಗೆ ಪೆÇಲೀಸರ ದೌರ್ಜನ್ಯ ನಡೆಯುತ್ತಿದೆ ಎಂದು ಮುಖಂಡರು ಆರೋಪಿಸಿದರು.


Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries