HEALTH TIPS

ಕೇದಾರನಾಥ: ಮೇ 6 ರಿಂದ ಭಕ್ತರಿಗೆ ಪ್ರವೇಶ

           ಉಖಿಮಠಈ ವರ್ಷ ಕೇದಾರನಾಥ ದೇಗುಲದ ಬಾಗಿಲುಗಳನ್ನು ಭಕ್ತರಿಗಾಗಿ ಮೇ 6 ರಂದು ಬೆಳಿಗ್ಗೆ 6.25 ಕ್ಕೆ ತೆರೆಯಲಾಗುವುದು.

           ಮಹಾಶಿವರಾತ್ರಿಯ ಪ್ರಯುಕ್ತ ಮಂಗಳವಾರ ಓಂಕಾರೇಶ್ವರ ದೇವಸ್ಥಾನದಲ್ಲಿ ಜರುಗಿದ ಸಮಾರಂಭದ ಬಳಿಕ ಕೇದಾರನಾಥ ದೇವಾಲಯವನ್ನು ತೆರೆಯುವ ದಿನಾಂಕ ಮತ್ತು ಸಮಯ ಪ್ರಕಟಿಸಲಾಯಿತು.

            ವೃಶ್ಚಿಕ ಲಗ್ನದಲ್ಲಿ ದೇವಸ್ಥಾನದ ದ್ವಾರಗಳನ್ನು ತೆರೆಯಲಾಗುವುದು ಎಂದು ಬದರಿ-ಕೇದಾರ ಮಂದಿರ ಸಮಿತಿಯ ಅಧಿಕಾರಿ ಹರೀಶ್‌ ಗೌಡ ಹೇಳಿದರು.

            ಈ ಪ್ರದೇಶದಲ್ಲಿ ಹಿಮಪಾತದ ಪರಿಸ್ಥಿತಿಗಳಿಂದಾಗಿ ಕೇದಾರನಾಥ ದೇವಾಲಯದ ದ್ವಾರಗಳನ್ನು ಮುಚ್ಚಲಾಗುತ್ತದೆ. ಚಳಿಗಾಲದಲ್ಲಿ ಉಖಿಮಠದ ಓಂಕಾರೇಶ್ವರ ದೇವಾಲಯದಲ್ಲಿ ಕೇದಾರನಾಥನನ್ನು ಪೂಜಿಸಲಾಗುತ್ತದೆ.

               ಶಿವನ ಪಂಚಮುಖಿ (ಐದು ಮುಖ) ಮೂರ್ತಿಯು ಮೇ 2 ರಂದು ಇಲ್ಲಿನ ಓಂಕಾರೇಶ್ವರ ದೇವಸ್ಥಾನದಿಂದ ಕೇದಾರನಾಥಕ್ಕೆ ಹೂವಿನಿಂದ ಅಲಂಕರಿಸಲ್ಪಟ್ಟ ಅಲಂಕೃತ ಪಲ್ಲಕ್ಕಿಯಲ್ಲಿ ಹೊರಡಲಿದೆ ಎಂದು ಗೌಡ್ ಹೇಳಿದರು.


Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries