HEALTH TIPS

ಓಖ್ಟಿರ್ಕಾ ವಾಯುನೆಲೆಯಲ್ಲಿ ರಷ್ಯಾ ಫಿರಂಗಿ ದಾಳಿ: 70ಕ್ಕೂ ಹೆಚ್ಚು ಉಕ್ರೇನ್ ಸೈನಿಕರು, 136 ನಾಗರಿಕರ ಸಾವು

             ಕೀವ್: ರಷ್ಯಾ ಉಕ್ರೇನ್ ವಿರುದ್ಧ ಯುದ್ಧ ಆರಂಭಿಸಿ ಆರನೇ ದಿನವಾಗಿದ್ದು, ಮೈಲುಗಟ್ಟಲೇ ದೂರದ ಟ್ಯಾಂಕರ್ ಗಳು ಮತ್ತು ಶಸಾಸ್ತ್ರ ಹೊತ್ತ ವಾಹನಗಳೊಂದಿಗೆ ಉಕ್ರೇನ್ ರಾಜಧಾನಿ ಸನಿಹಕ್ಕೆ ತಲುಪಿದ್ದು, ಯುದ್ಧ ಭೂಮಿಯಲ್ಲಿ ಹೋರಾಟವನ್ನು ತೀವ್ರಗೊಳಿಸಿದೆ. 

            ಉಕ್ರೇನ್ ನ ಎರಡನೇ ಅತಿದೊಡ್ಡ ನಗರ ಖಾರ್ಕಿವ್ ನಲ್ಲಿ ಮಂಗಳವಾರ ರಷ್ಯಾಪಡೆ ನಾಗರಿಕರನ್ನು ಗುರಿಯಾಗಿಟ್ಟುಕೊಂಡು ಶೆಲ್ಲಿಂಗ್ ದಾಳಿ ನಡೆಸಿದ್ದು, ಅಪಾರ ಪ್ರಮಾಣದ ಸಾವು ನೋವು ಸಂಭವಿಸಿದೆ. ರಷ್ಯಾ ಇತ್ತೀಚಿಗೆ ಖಾರ್ಕಿವ್ ಮತ್ತು ಕೀವ್ ಮಧ್ಯದಲ್ಲಿರುವ ಓಖ್ಟಿರ್ಕಾ ವಾಯುನೆಲೆಯಲ್ಲಿ ನಡೆಸಿದ ಫಿರಂಗಿ ದಾಳಿಯಲ್ಲಿ 70ಕ್ಕೂ ಹೆಚ್ಚು ಉಕ್ರೇನ್ ಸೈನಿಕರು ಸಾವನ್ನಪ್ಪಿರುವುದಾಗಿ ವರದಿಯಾಗಿದೆ.

              ಆದರೆ, ಉಕ್ರೇನ್ ಸೈನಿಕರು ಕೂಡಾ ತೀವ್ರ ಪ್ರತಿರೋಧ ನೀಡುತ್ತಿದ್ದಾರೆ. ಕುತೂಹಲವೆಂದರೆ ವಾಯು ಮಾರ್ಗದಲ್ಲಿ ರಷ್ಯಾ ಪ್ರಾಬಲ್ಯ ಸಾಧಿಸಲು ಆಗುತ್ತಿಲ್ಲ. ಪಾಶ್ಚಿಮಾತ್ಯ ರಾಷ್ಟ್ರಗಳು ವಾಯು ಮಾರ್ಗ ಮುಚ್ಚಿರುವ ಕಾರಣದಿಂದ ರಷ್ಯಾದಲ್ಲಿ ಆತಂಕ ಹೆಚ್ಚಾಗಿದೆ. ಉಕ್ರೇನ್ ನ ಅಂಡರ್ ಗ್ರೌಂಡ್, ನೆಲ ಅಂತಸ್ತು ಮತ್ತಿತರ ಕಡೆಗಳಲ್ಲಿ ಜನರು ಆಶ್ರಯ ಪಡೆದಿದ್ದಾರೆ. ಯುದ್ದದಿಂದ ತೊಂದರೆಗೊಳಾದ ಜನರಿಗೆ ನೆರವಾಗಲು  272 ಮಿಲಿಯನ್ ಡಾಲರ್ ನೆರವಿಗೆ ರೆಡ್ ಕ್ರಾಸ್ ಸಂಸ್ಥೆ ಮನವಿ ಮಾಡಿದೆ. 

           130 ಕ್ಕೂ ಹೆಚ್ಚು ಉಕ್ರೇನಿಯನ್ನರು ಬಲಿ:   ರಷ್ಯಾ ಉಕ್ರೇನ್ ನಡುವಿನ ಮಿಲಿಟರಿ ದಾಳಿಯಲ್ಲಿ 13 ಮಕ್ಕಳು ಸೇರಿದಂತೆ ಕನಿಷ್ಠ 136 ನಾಗರಿಕರು ಸಾವನ್ನಪ್ಪಿದ್ದಾರೆ ಮತ್ತು 400 ಜನರು ಗಾಯಗೊಂಡಿದ್ದಾರೆ ಎಂದು ವಿಶ್ವಸಂಸ್ಥೆಯ ಮಾನವ ಹಕ್ಕುಗಳ ಕಚೇರಿ (ಒಎಚ್ ಸಿಎಚ್ ಆರ್) ಮಂಗಳವಾರ ತಿಳಿಸಿದೆ.

               ಒಎಚ್ ಸಿಎಚ್ ಆರ್ ವಕ್ತಾರ ಲಿಜ್ ಥ್ರೋಸೆಲ್, ಫೆಬ್ರವರಿ 24 ಬೆಳಿಗ್ಗೆ ಮತ್ತು ಮಧ್ಯರಾತ್ರಿಯ ನಡುವೆ, ಉಕ್ರೇನ್‌ನಲ್ಲಿ 536 ನಾಗರಿಕ ಸಾವುನೋವು ಸಂಭವಿಸಿದೆ ಇದರಲ್ಲಿ 136 ನಾಗರಿಕರು ಸಾವನ್ನಪ್ಪಿದ್ದಾರೆ ಅವರಲ್ಲಿ 13 ಮಕ್ಕಳು ಮತ್ತು 26 ಮಕ್ಕಳು ಸೇರಿದಂತೆ 400 ನಾಗರಿಕರು ಗಾಯಗೊಂಡಿರುವ ಬಗ್ಗೆ ನಮ್ಮ ಕಚೇರಿಗೆ ಮಾಹಿತಿ ಲಭ್ಯವಾಗಿದೆ ಎಂದು ಹೇಳಿದ್ದಾರೆ. 

            ಈ ಹೆಚ್ಚಿನ ಸಾವುನೋವುಗಳು “ಭಾರೀ ಫಿರಂಗಿ ಮತ್ತು ಬಹು ಉಡಾವಣಾ ರಾಕೆಟ್ ವ್ಯವಸ್ಥೆಗಳು ಮತ್ತು ವೈಮಾನಿಕ ದಾಳಿಗಳು ಸೇರಿದಂತೆ ವ್ಯಾಪಕ ಪ್ರಭಾವದ ಪ್ರದೇಶದೊಂದಿಗೆ ಸ್ಫೋಟಕ ಶಸ್ತ್ರಾಸ್ತ್ರಗಳ ಬಳಕೆಯಿಂದ ಉಂಟಾಗಿದೆ. ಸಾವು ನೋವುಗಳ ಸಂಖ್ಯೆ ಹೆಚ್ಚಾಗುವ ಸಾಧ್ಯತೆ ಇದೆ ಎಂದು ಅವರು ಹೇಳಿದರು.

            ಇದಕ್ಕೂ ಮೊದಲು, ದಿ ಗಾರ್ಡಿಯನ್ ನ್ಯಾಟೋ ಮುಖ್ಯಸ್ಥ ಜೆನ್ಸ್ ಸ್ಟೋಲ್ಟೆನ್ ಬರ್ಗ್ ರಷ್ಯಾವನ್ನು ಯುದ್ಧವನ್ನು ಕೊನೆಗೊಳಿಸಲು ಮತ್ತು ತನ್ನ ಪಡೆಗಳನ್ನು ಹಿಂತೆಗೆದುಕೊಳ್ಳುವಂತೆ ಕರೆ ನೀಡಿದ್ದನ್ನು ಉಲ್ಲೇಖಿಸಿದೆ. ನ್ಯಾಟೋ ರಕ್ಷಣಾತ್ಮಕ ಮೈತ್ರಿಯಾಗಿದೆ, ನಾವು ರಷ್ಯಾದೊಂದಿಗೆ ಸಂಘರ್ಷವನ್ನು ಬಯಸುವುದಿಲ್ಲ. ರಷ್ಯಾ ತಕ್ಷಣವೇ ಯುದ್ಧವನ್ನು ನಿಲ್ಲಿಸಬೇಕು, ಉಕ್ರೇನ್‌ನಿಂದ ತನ್ನ ಎಲ್ಲಾ ಪಡೆಗಳನ್ನು ಹಿಂತೆಗೆದುಕೊಳ್ಳಬೇಕು ಮತ್ತು ರಾಜತಾಂತ್ರಿಕ ಪ್ರಯತ್ನಗಳಲ್ಲಿ ಉತ್ತಮ ನಂಬಿಕೆಯಲ್ಲಿ ತೊಡಗಬೇಕು ಎಂದು ಹೇಳಿದ್ದಾರೆ.


Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries