HEALTH TIPS

ರಾಜ್ಯದಲ್ಲಿ ಇಂದು 702 ಮಂದಿಗೆ ಕೊರೊನಾ ಸೋಂಕು ಪತ್ತೆ


      ತಿರುವನಂತಪುರ: ರಾಜ್ಯದಲ್ಲಿ ಇಂದು 702 ಮಂದಿಗೆ ಕೊರೊನಾ ಸೋಂಕು ದೃಢಪಟ್ಟಿದೆ.  ಎರ್ನಾಕುಳಂ 155, ತಿರುವನಂತಪುರ 81, ಕೊಟ್ಟಾಯಂ 71, ಕೋಝಿಕ್ಕೋಡ್ 67, ಪತ್ತನಂತಿಟ್ಟ 61, ಕೊಲ್ಲಂ 48, ತ್ರಿಶೂರ್ 47, ಇಡುಕ್ಕಿ 41, ಕಣ್ಣೂರು 35, ಮಲಪ್ಪುರಂ 34, ಆಲಪ್ಪುಳ 23, ಪಾಲಕ್ಕಾಡ್ 19, ವಯನಾಡ್ 13 ಮತ್ತು  ಕಾಸರಗೋಡು 7 ಮಂದಿ ಎಂಬಂತೆ ಕೋವಿಡ್ ಪತ್ತೆಯಾಗಿದೆ. ಕಳೆದ 24 ಗಂಟೆಗಳಲ್ಲಿ 23,238 ಮಾದರಿಗಳನ್ನು ಪರೀಕ್ಷಿಸಲಾಗಿದೆ.
        ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಪ್ರಸ್ತುತ 16,540 ಮಂದಿ ಜನರು ಕಣ್ಗಾವಲಿನಲ್ಲಿದ್ದಾರೆ.  ಇವರಲ್ಲಿ 17,541 ಮಂದಿ ಮನೆ/ ಸಾಂಸ್ಥಿಕ ಕ್ವಾರಂಟೈನ್‌ನಲ್ಲಿದ್ದಾರೆ ಮತ್ತು 500 ಮಂದಿ ಆಸ್ಪತ್ರೆಯ ನಿಗಾದಲ್ಲಿದ್ದಾರೆ.  ಇಂದು 80 ಮಂದಿ ಹೊಸದಾಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ.  ಪ್ರಸ್ತುತ, 5091 ಕೊರೋನಾ ಪ್ರಕರಣಗಳಲ್ಲಿ, ಕೇವಲ 10 ಶೇ. ಜನರು   ಮಾತ್ರ ಆಸ್ಪತ್ರೆ / ಸ್ಥಳೀಯ ಆಸ್ಪತ್ರೆಗಳಿಗೆ ದಾಖಲಾಗಿದ್ದಾರೆ.
       ಕಳೆದ 24 ಗಂಟೆಗಳಲ್ಲಿ  ಕೋವಿಡ್ ಬಾಧಿಸಿ ಇಬ್ಬರು ಮೃತರಾಗಿದ್ದಾರೆ. ಇದಲ್ಲದೆ, ಹಿಂದಿನ ದಿನಗಳಲ್ಲಿ ದಾಖಲೆಗಳನ್ನು ತಡವಾಗಿ ಸ್ವೀಕರಿಸಿದ ಕಾರಣ 6 ಸಾವುಗಳು ಮತ್ತು ಸುಪ್ರೀಂ ಕೋರ್ಟ್‌ನ ಹೊಸ ಮಾರ್ಗಸೂಚಿಗಳ ಅಡಿಯಲ್ಲಿ ಕೇಂದ್ರ ಸರ್ಕಾರವು ಮೇಲ್ಮನವಿ ಸಲ್ಲಿಸಿದ್ದರಿಂದ 53 ಸಾವುಗಳು ವರದಿಯಾಗಿವೆ.  ಈ ಮೂಲಕ ರಾಜ್ಯದಲ್ಲಿ ಒಟ್ಟು ಸಾವಿನ ಸಂಖ್ಯೆ 67,476ಕ್ಕೆ ಏರಿಕೆಯಾಗಿದೆ.
       ಇಂದು ದೃಢಪಟ್ಟಿರುವ ನಾಲ್ಕು ಪ್ರಕರಣಗಳು ಹೊರ ರಾಜ್ಯದಿಂದ ಬಂದವರು.  669 ಮಂದಿ ಸಂಪರ್ಕದಿಂದ ಸೋಂಕಿಗೆ ಒಳಗಾಗಿದ್ದಾರೆ.  ಸಂಪರ್ಕದ ಮೂಲ 28 ಸ್ಪಷ್ಟವಾಗಿಲ್ಲ.  ಆರೋಗ್ಯ ಕಾರ್ಯಕರ್ತರೊಬ್ಬರಿಗೆ ಮಾತ್ರ ಇಂದು ಕೊವಿಡ್ ತ್ತೆಯಾಗಿದೆ.
      ರೋಗನಿರ್ಣಯ ಮತ್ತು ಚಿಕಿತ್ಸೆ ಪಡೆದ 903 ಮಂದಿ ಜನರು ಗುಣಮುಖರಾಗಿದ್ದಾರೆ.  ತಿರುವನಂತಪುರ 127, ಕೊಲ್ಲಂ 25, ಪತ್ತನಂತಿಟ್ಟ 25, ಆಲಪ್ಪುಳ 5, ಕೊಟ್ಟಾಯಂ 168, ಇಡುಕ್ಕಿ 69, ಎರ್ನಾಕುಳಂ 198, ತ್ರಿಶೂರ್ 121, ಪಾಲಕ್ಕಾಡ್ 5, ಮಲಪ್ಪುರಂ 21, ಕೋಝಿಕ್ಕೋಡ್ 67, ವಯನಾಡ್ 40, ಕಣ್ಣೂರು 32 ಎಂಬಂತೆ ಗುಣಮುಖರಾಗಿದ್ದು,  ಕಾಸರಗೋಡಲ್ಲಿ ಯಾರೂ ಗುಣಮುಖರಾದ ವರದಿ ಲಭ್ಯವಾಗಿಲ್ಲ.  
       ಇದರೊಂದಿಗೆ 5091 ಮಂದಿಗೆ ಸೋಂಕು ದೃಢಪಟ್ಟಿದ್ದು, ಇನ್ನೂ ಚಿಕಿತ್ಸೆ ಪಡೆಯುತ್ತಿದ್ದಾರೆ.  ಇದುವರೆಗೆ 64,55,655 ಮಂದಿ ಜನರು ಕೊರೊನಾದಿಂದ ಮುಕ್ತರಾಗಿದ್ದಾರೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries