ತಿರುವನಂತಪುರ: ಕೇರಳದಲ್ಲಿ ಮಾವೋವಾದಿಗಳ ಎನ್ಕೌಂಟರ್ಗಳು ನಕಲಿ ಎಂದು ಕೆಪಿಸಿಸಿ ಅಧ್ಯಕ್ಷ ಕೆ.ಸುಧಾಕರನ್ ಹೇಳಿದ್ದಾರೆ. ಭದ್ರತಾ ದೃಷ್ಟಿಯಿಂದ ಕೇಂದ್ರ ಸರ್ಕಾರದಿಂದ ಆರ್ಥಿಕ ನೆರವು ಪಡೆಯುವ ತಂತ್ರ ಇದಾಗಿದೆಯೇ ಎಂಬ ಅನುಮಾನ ಮೂಡಿದೆ. ಪಿಣರಾಯಿ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಕೇರಳದಲ್ಲಿ ಮಾವೋವಾದಿಗಳ ಬೇಟೆ ಹುಸಿಯಾಗಿದೆ ಎಂಬ ಆರೋಪವೂ ಬಲವಾಗುತ್ತಿದೆ ಎಂದು ಸುಧಾಕರನ್ ಫೇಸ್ ಬುಕ್ ನಲ್ಲಿ ಆರೋಪಿಸಿದ್ದಾರೆ.
ಮಾವೋವಾದಿಗಳ ಬೇಟೆಗೆ ಕೇರಳ ಕೇಂದ್ರದ ನೆರವು ಪಡೆಯುತ್ತಿದೆ ಎಂದು ಕೇಂದ್ರ ಗೃಹ ಸಚಿವಾಲಯ ಲಿಖಿತವಾಗಿ ಸ್ಪಷ್ಟಪಡಿಸಿದೆ ಎಂದು ಸುಧಾಕರನ್ ಹೇಳಿದರು. ಕೇಂದ್ರ ಗೃಹ ಸಚಿವಾಲಯದ ಪ್ರಕಾರ, 2000 ಮತ್ತು 2021 ರ ನಡುವೆ ಮಾವೋವಾದಿಗಳು ಕೇರಳದಲ್ಲಿ 2016ರ ನಂತರವಷ್ಟೇ ಕೊಲ್ಲಲ್ಪಟ್ಟರು. ಈ ಅವಧಿಯಲ್ಲಿ ಇದುವರೆಗೆ ಎಂಟು ಮಾವೋವಾದಿಗಳು ಪೆÇಲೀಸರ ಗುಂಡಿಗೆ ಬಲಿಯಾಗಿದ್ದಾರೆ ಎಂದು ಸುಧಾಕರನ್ ಆರೋಪಿಸಿದರು.
ಹತ್ಯೆಯಾದವರೆಲ್ಲರೂ ನಿರಾಯುಧರು ಎಂದು ಸುಧಾಕರನ್ ಹೇಳಿದ್ದಾರೆ. ಅವರನ್ನು ಜೀವಂತವಾಗಿ ಹಿಡಿಯುವ ಪ್ರಯತ್ನವೂ ನಡೆದಿಲ್ಲ. ಪ್ರತೀಕಾರದ ಪುರಾವೆಗಳ ಕೊರತೆಯೂ ಈ ಮಾನವ ಬೇಟೆಯ ನಿಗೂಢತೆಯನ್ನು ಹೆಚ್ಚಿಸುತ್ತದೆ. ಈ ಹಿಂದೆ ಕೇರಳದಲ್ಲಿ ನಡೆದ ಮಾವೋವಾದಿಗಳ ಘರ್ಷಣೆಗಳೆಲ್ಲವೂ ನಕಲಿ ಎಂದು ಆರೋಪಿಸಲಾಗಿದ್ದು, ಭದ್ರತಾ ದೃಷ್ಟಿಯಿಂದ ಕೇಂದ್ರ ಸರ್ಕಾರದಿಂದ ಆರ್ಥಿಕ ನೆರವು ಪಡೆಯುವ ತಂತ್ರ ಇದಾಗಿದೆ. ಇದೀಗ ಬಂದಿರುವ ದಾಖಲೆಗಳು ಇಂತಹ ಆರೋಪಗಳಿಗೆ ಪುಷ್ಟಿ ನೀಡುತ್ತವೆ ಎಂದು ಕೆಪಿಸಿಸಿ ಅಧ್ಯಕ್ಷರು ಸ್ಪಷ್ಟಪಡಿಸಿದ್ದಾರೆ.
ಮಲಪ್ಪುರಂ, ಪಾಲಕ್ಕಾಡ್ ಮತ್ತು ವಯನಾಡ್ ಜಿಲ್ಲೆಗಳನ್ನು ಮಾವೋವಾದಿ ಸಮಸ್ಯೆಯ ಜಿಲ್ಲೆಗಳೆಂದು ಪರಿಗಣಿಸಲಾಗಿದೆ ಎಂದು ಸುಧಾಕರನ್ ಹೇಳಿದ್ದಾರೆ. ಕೇಂದ್ರ ಸರ್ಕಾರವು 2018 ರ ಏಪ್ರಿಲ್ನಲ್ಲಿ ಭದ್ರತಾ ವೆಚ್ಚಕ್ಕಾಗಿ `6 ಕೋಟಿ ಮತ್ತು ವಿಶೇಷ ಮೂಲಸೌಕರ್ಯ ಯೋಜನೆಯಡಿ ಕೇರಳಕ್ಕೆ 6.67 ಕೋಟಿ ರೂಪಾಯಿಗಳನ್ನು ಮಂಜೂರು ಮಾಡಿದೆ ಎಂದು ಅವರು ಆರೋಪಿಸಿದರು.
ಕೇರಳದಲ್ಲಿ ನಡೆದ ಮಾವೋವಾದಿಗಳ ಹತ್ಯೆಯ ಬಗ್ಗೆ ನ್ಯಾಯಾಂಗ ತನಿಖೆ ನಡೆಯಬೇಕು. ಸರಕಾರ ಕಣ್ಣು ಮುಚ್ಚಿ ಕುಳಿತಿದೆ ಎಂದು ಕೆಪಿಸಿಸಿ ಅಧ್ಯಕ್ಷ ಕೆ.ಸುಧಾಕರನ್ ಆರೋಪಮಾಡಿ ಒತ್ತಾಯಿಸಿದರು. ಪೋಲೀಸರು ಹೆಚ್ಚಿನ ನಿಧಿ ಪಡೆಯಲು ಇನ್ನಷ್ಟು ಕೊಲೆಗಳನ್ನು ಮಾಡುತ್ತಾರೆ ಎಂಬ ಭಯವಿದೆ. ಈ ಹಿನ್ನೆಲೆಯಲ್ಲಿ ಕೇರಳದಲ್ಲಿ ನಡೆದ ಮಾವೋವಾದಿಗಳ ಹತ್ಯೆಯ ಬಗ್ಗೆ ಕೂಲಂಕುಷ ತನಿಖೆ ನಡೆಸಲು ರಾಜ್ಯ ಸರ್ಕಾರ ಸಿದ್ಧವಾಗಬೇಕಿದೆ ಎಂದವರು ತಿಳಿಸಿದರು.




.webp)
