ಕಾಸರಗೋಡು: ರಂಗಚಿನ್ನಾರಿ ಕಾಸರಗೋಡು, ಕನ್ನಡ ಮತ್ತು ಸಂಸ್ಕøತಿ ಇಲಾಖೆ ಬೆಂಗಳೂರು ಇವರ ಸಹಯೋಗದೊಂದಿಗೆ ಮೇಘರಂಜನಾ ಟ್ರಸ್ಟ್ ಮತ್ತು ಶೇಷವನ ಶ್ರೀ ಸುಬ್ರಹ್ಮಣ್ಯ ದೇವಸ್ಥಾನ ಟ್ರಸ್ಟ್ ಸಂಯುಕ್ತ ಆಶ್ರಯದಲ್ಲಿ ಭಕ್ತಿ-ಬಾವ-ಜನಪದ ಗೀತೆಗಳ ಗಾಯನ ಕಾರ್ಯಕ್ರಮ ನಡೆ-ನುಡಿ-ಕನ್ನಡ ಜರಗಿತು.
ಖ್ಯಾತ ಘಟಂ ಕಲಾವಿದ ಬಿ ಜಿ ಈಶ್ವರ ಭಟ್ ಕಾರ್ಯಕ್ರಮವನ್ನು ದೀಪಬೆಳಗಿಸಿ ಉದ್ಘಾಟಿಸಿದರು. ಶೇಷವನ ಶ್ರೀ ಸುಬ್ರಹ್ಮಣ್ಯ ದೇವಸ್ಥಾನ ಟ್ರಸ್ಟ್ ಆಡಳಿತ ಮೊಕ್ತೇಸರ ಕಿರಣ್ ಪ್ರಸಾದ್ ಕೂಡ್ಲು ಅಧ್ಯಕ್ಷತೆ ವಹಿಸಿದರು. ಶ್ರೀ ಸುಬ್ರಹ್ಮಣ್ಯ ದೇವಸ್ಥಾನ ಅನುವಂಶಿಕ ಮೊಕ್ತೇಸರ ಸದಾಶಿವ, ಕಾಸರಗೋಡು ಬ್ಲಾಕ್ ಪಂಚಾಯತು ಸದಸ್ಯ ಸುಕುಮಾರ ಕುದ್ರೆಪಾಡಿ, ಮೊಗ್ರಾಲ್ ಪುತ್ತೂರು ಗ್ರಾಮ ಪಂಚಾಯತು ಸದಸ್ಯ ಸಂಪತ್, ಡಾ. ನಾ ದಾ ಶೆಟ್ಟಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದರು. ಶೇಷವನ ಮಹಿಳಾ ಸಂಘದ ರಕ್ಷಾಧಿಕಾರಿ ಆಶಾ ಉಪಾಧ್ಯಾಯ, ಅಧ್ಯಕ್ಷೆ ರತ್ನಾ ಪಾಯಿಚ್ಚಾಲು, ಯುವಕ ಸಂಘದ ಅಧ್ಯಕ್ಷ ರಮೇಶ್ ಉಪಸ್ಥಿತರಿದ್ದರು. ಹಿರಿಯ ಹಾರ್ಮೋನಿಯಂ ಕಲಾವಿದ ಭಾಸ್ಕರ ಕಾಳ್ಯಂಗಾಡು ಇವರನ್ನು ರಂಗಚಿನ್ನಾರಿ ವತಿಯಿಂದ ಸನ್ಮಾನಿಸಲಾಯಿತು.
ಬಳಿಕ ಪ್ರಶಸ್ತಿ ವಿಜೇತ ಗಾಯಕರಾದ ರವೀಂದ್ರ ಪ್ರಭು ಮುಲ್ಕಿ, ಮಾಲಿನಿ ಕೇಶವ ಪ್ರಸಾದ್, ಕಿಶೋರ್ ಕುಮಾರ್ ಪೆರ್ಲ ಇವರಿಂದ ಭಕ್ತಿ-ಬಾವ-ಜನಪದ ಗೀತೆಗಳ ಗಾಯನ ಕಾರ್ಯಕ್ರಮ ಜರಗಿತು. ಹಿಮ್ಮೇಳದಲ್ಲಿ ಕೀಬೋರ್ಡ್ ವಾದಕ ಪುರುಷೋತ್ತಮ ಕೊಪ್ಪಲ್, ತಬ್ಲಾ ದಲ್ಲಿ ಅಭಿಜಿತ್ ಶೆಣೈ, ರಿದಂ ಪ್ಯಾಡ್ ನಲ್ಲಿ ರಾಜೇಶ್ ಭಾಗವತ್ ಸಹಕರಿಸಿದರು. ರಂಗಚಿನ್ನಾರಿ ಕಾಸರಗೋಡು ಇದರ ನಿರ್ದೇಶಕರಾದ ಸತೀಶ್ ಚಂದ್ರ ಭಂಡಾರಿ, ಸತ್ಯನಾರಾಯಣ ಕೆ, ಮೇಘರಂಜನಾ ಟ್ರಸ್ಟ್ ನ ನಿರ್ದೇಶಕ ಪುರುಷೋತ್ತಮ ಕೊಪ್ಪಲ್, ರೂಪಕಲಾ ಕೊಪ್ಪಲ್, ಶೇಷವನ ಟ್ಟಸ್ಟ್ ಕಾರ್ಯದರ್ಶಿ ವಸಂತ ನಾಂಗುರಿ, ಸದಸ್ಯರಾದ ಸಸೀಂದ್ರನ್, ಸುನಂದ, ಶೇಷವನ ಮಹಿಳಾ ಸಂಘದ ಕಾರ್ಯದರ್ಶಿ ಲಾವಣ್ಯ ಮುಂತಾದವರು ಸಹಕರಿಸಿದರು.ರಂಗಚಿನ್ನಾರಿ ಕಾಸರಗೋಡು ಇದರ ನಿರ್ದೇಶÀಕರಾದ ಕಾಸರಗೋಡು ಚಿನ್ನಾ ಸ್ವಾಗತಿಸಿ, ಶೇಷವನ ಶ್ರೀ ಸುಬ್ರಹ್ಮಣ್ಯ ದೇವಸ್ಥಾನ ಟ್ರಸ್ಟ್ ಕೋಶಾಧಿಕಾರಿ ಸುರೇಶ್ ನಾಯ್ಕ್ ವಂದಿಸಿದರು.