ಕೋಯಿಕ್ಕೋಡ್: ಲವ್ ಜಿಹಾದ್ ಒಂದು ಸಾಮಾಜಿಕ ಸಮಸ್ಯೆ ಎಂದು ತಲಶ್ಚೇರಿ ಆರ್ಚ್ಡಯಾಸಿಸ್ನ ಆರ್ಚ್ಬಿಷಪ್ ಮಾರ್ ಜೋಸೆಫ್ ಪಂಪ್ಲಾನಿ ಬಹಿರಂಗವಾಗಿ ಹೇಳಿದ್ದಾರೆ. ಕೇರಳದಲ್ಲಿ ಲವ್ ಜಿಹಾದ್ಗೆ ನೂರಾರು ಉದಾಹರಣೆಗಳಿವೆ. ಭಯೋತ್ಪಾದಕ ಸಂಘಟನೆಗಳು ಪ್ರೀತಿಯ ಹೆಸರಲ್ಲಿ ಕುತಂತ್ರಗಳನ್ನು ಹುಟ್ಟುಹಾಕಿವೆ ಎಂದೂ ಆರ್ಚ್ ಬಿಷಪ್ ಹೇಳಿದ್ದಾರೆ.
ಇದು ಇಸ್ಲಾಂ ಮತ್ತು ಕ್ರಿಶ್ಚಿಯನ್ ಧರ್ಮದ ನಡುವಿನ ವಿಷಯವಲ್ಲ. ಇದರ ಹಿಂದೆ ಉಗ್ರಗಾಮಿ ದೃಷ್ಟಿಕೋನ ಹೊಂದಿರುವ ಕೆಲವು ವ್ಯಕ್ತಿಗಳು ಮತ್ತು ಚಳವಳಿಗಳಿವೆ. ಇಂತಹ ಉಗ್ರಗಾಮಿ ಗುಂಪುಗಳು ಹುಡುಗಿಯರನ್ನು ಕೆಲವು ಕೇಂದ್ರಗಳಿಗೆ ಕರೆದೊಯ್ದು ಮತಾಂತರ ಆಗುವಂತೆ ಒತ್ತಾಯಿಸುತ್ತಾರೆ. ಪಟ್ಟಿಯನ್ನು ಚರ್ಚ್ ಬಿಡುಗಡೆ ಮಾಡಬೇಕಾಗಿಲ್ಲ. ಕೊಡಂಚೇರಿಯಲ್ಲಿ ಜೋಯಿಸ್ ಅವರ ಪೋಷಕರು ಎತ್ತಿರುವ ಕಳವಳವನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಬೇಕು ಎಂದು ಆರ್ಚ್ ಬಿಷಪ್ ಹೇಳಿದರು.