HEALTH TIPS

ಹಲ್ಲೆ ಪ್ರಕರಣದ ನಟಿ ಇಂದು ಮುಖ್ಯಮಂತ್ರಿಯ ಭೇಟಿ: ಸೆಕ್ರೆಟರಿಯೇಟ್ ನಲ್ಲಿ ಸಭೆ

                     ಕೊಚ್ಚಿ; ಹಲ್ಲೆ ಪ್ರಕರಣದ ಸಂತ್ರಸ್ಥೆ ನಟಿ ಇಂದು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರನ್ನು ಭೇಟಿಯಾಗಲಿದ್ದಾರೆ. ಬೆಳಗ್ಗೆ 10 ಗಂಟೆಗೆ ಸಚಿವಾಲಯದಲ್ಲಿ ಸಭೆ ನಡೆಯಲಿದೆ. ಮುಂದಿನ ತನಿಖೆಯ ಬಗ್ಗೆ ತಮ್ಮ ಕಾಳಜಿಯನ್ನು ನಟಿ ಮುಖ್ಯಮಂತ್ರಿಗೆ ತಿಳಿಸುತ್ತಾರೆ. ರಾಜಕೀಯ ಧೋರಣೆ ವಿರುದ್ಧ ದೂರು ದಾಖಲಿಸಲಿದ್ದಾರೆ ಎಂದು ವರದಿಯಾಗಿದೆ.

                ಪ್ರಕರಣದಲ್ಲಿ ಸರ್ಕಾರದ ಶಾಮೀಲು ವಿರುದ್ಧ ನಟಿ ದೂರಿನ ವಿವಾದದ ನಡುವೆಯೇ ಈ ಮಹತ್ವದ ಸಭೆ ನಡೆಯಲಿದೆ. ಪ್ರಕರಣದ ತನಿಖೆಯನ್ನು ಸರ್ಕಾರ ಹಾಳು ಮಾಡಿದೆ ಎಂದು ಆರೋಪಿಸಿ ಸಂತ್ರಸ್ತೆ ಹೈಕೋರ್ಟ್‍ಗೆ ಅರ್ಜಿ ಸಲ್ಲಿಸಿದ್ದರು. ಪ್ರಕರಣದ ಆರೋಪಿ ದಿಲೀಪ್‍ಗೆ ಉನ್ನತ ರಾಜಕೀಯ ನಾಯಕರ ನೆರವು ಸಿಗುತ್ತಿದೆ ಎಂಬ ಆರೋಪ ಕೇಳಿಬಂದಿತ್ತು. ಇದರ ಬೆನ್ನಲ್ಲೇ ಸಿಪಿಎಂ ನಾಯಕರ ಗುಂಪೆÇಂದು ನಟಿಯ ಮೇಲೆ ಹಲ್ಲೆ ನಡೆಸಿತ್ತು. ನಂತರ ಮಾತನಾಡಿದ ಮುಖ್ಯಮಂತ್ರಿಗಳು, ಸರ್ಕಾರ ಸಂತ್ರಸ್ಥೆಯ ಜೊತೆಗಿದ್ದು, ನ್ಯಾಯ ಸಿಗಲಿದೆ ಎಂದು ಹೇಳಿದರು.

                  ಪ್ರಕರಣವನ್ನು ಹಾಳುಗೆಡವುವ ಹುನ್ನಾರ ನಡೆಯುತ್ತಿದ್ದು, ನ್ಯಾಯಾಲಯ ಮಧ್ಯಪ್ರವೇಶಿಸಿ ನ್ಯಾಯ ದೊರಕಿಸಿಕೊಡಬೇಕು ಎಂದು ನೊಂದ ನಟಿ ಅರ್ಜಿ ಸಲ್ಲಿಸಿದ್ದಾರೆ. ಇದೇ ವೇಳೆ, ತನಿಖೆ ನಡೆಯುತ್ತಿಲ್ಲ ಎಂಬ ನಟಿಯ ಭಯ ಅನಗತ್ಯ ಎಂದು ಪ್ರಾಸಿಕ್ಯೂಟರ್‍ಗಳ ಮಹಾನಿರ್ದೇಶಕರು ನ್ಯಾಯಾಲಯದಲ್ಲಿ ವಾದಿಸಿದರು.


Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries