HEALTH TIPS

ಕಾಶ್ಮೀರ ಕಣಿವೆಯಲ್ಲಿ ಅಶಾಂತಿ: ಉಗ್ರರಿಗೆ ನೆರವು, ಯಾಸಿನ್​ ದೋಷಿ

            ನವದೆಹಲಿ: ಕಾಶ್ಮೀರ ಕಣಿವೆಯಲ್ಲಿ 2017ರಲ್ಲಿ ಅಶಾಂತಿಗೆ ಕಾರಣವಾದ ಭಯೋತ್ಪಾದನೆ ಪ್ರಕರಣದ ಸಂಬಂಧ ರಾಷ್ಟ್ರೀಯ ತನಿಖಾ ಸಂಸ್ಥೆಯ (ಎನ್​ಐಎ) ಕೋರ್ಟ್​ ಗುರುವಾರ ಪ್ರತ್ಯೇಕತಾವಾದಿ ನಾಯಕ ಯಾಸಿನ್​ ಮಲ್ಲಿಕ್​ ಅಪರಾಧಿ ಎಂದು ತೀರ್ಪು ನೀಡಿದೆ.

           ಶಿೆಯ ಪ್ರಮಾಣದ ಬಗ್ಗೆ ಮೇ 25ರಂದು ಅದು ವಿಚಾರಣೆ ನಡೆಸಲಿದೆ.

             ಕಠಿಣ ಕಾನೂನುಬಾಹಿರ ಚಟುವಟಿಕೆ ತಡೆ ಕಾನೂನು (ಯುಎಪಿಎ) ಅಡಿಯಲ್ಲಿ ಬರುವ ಆರೋಪಗಳ ಸಹಿತ ತನ್ನ ವಿರುದ್ಧದ ಎಲ್ಲ ಆರೋಪಗಳನ್ನು ಮಲ್ಲಿಕ್​ ಮೇ 10ರಂದು ಒಪ್ಪಿಕೊಂಡಿದ್ದ. ಹಣಕಾಸು ವಿವರಗಳನ್ನು ಸಲ್ಲಿಸುವಂತೆ ಆತನಿಗೆ ಸೂಚಿಸಿದ್ದ ಕೋರ್ಟ್​, ಆ ಬಗ್ಗೆ ಪರಿಶೀಲಿಸುವಂತೆ ಎನ್​ಐಎಗೆ ನಿರ್ದೇಶಿಸಿತ್ತು. ತಪ್ಪೊಪ್ಪಿಗೆ ಬಗ್ಗೆ ಮರುಪರಿಶೀಲನೆ ನಡೆಸುತ್ತೀರಾ ಎಂದು ನ್ಯಾಯಾಧೀಶರು ಕೇಳಿದ್ದ ಪ್ರಶ್ನೆಗೆ ಪ್ರತಿಕ್ರಿಯಿಸಿದ್ದ ಮಲ್ಲಿಕ್​, ಚೆನ್ನಾಗಿ ಯೋಚಿಸಿಯೇ ತಾನು ನಿರ್ಧಾರ ತೆಗೆದುಕೊಂಡಿರುವುದಾಗಿ ಹೇಳಿದ್ದ. ಅಮಿಕಸ್​ ಕ್ಯೂರಿಯನ್ನು ಎರಡು ಬಾರಿ ಭೇಟಿಯಾಗಿ ಚಚಿರ್ಸಿದ್ದ. ಮಲ್ಲಿಕ್​ ಸ್ವಪ್ರೇರಣೆಯಿಂದ ಹಾಗೂ ಎಲ್ಲ ಕಾನೂನಾತ್ಮಕ ಪ್ರಕ್ರಿಯೆಗಳ ನಂತರ ತನ್ನ ವಿರುದ್ಧದ ಆರೋಪಗಳನ್ನು ಒಪ್ಪಿಕೊಂಡಿದ್ದು ಅದನ್ನು ಅಂಗೀಕರಿಸಲಾಗಿದೆ ಎಂದು ಜಡ್ಜ್​ ತೀಪಿರ್ನಲ್ಲಿ ಹೇಳಿದ್ದಾರೆ.

                   ಕಲ್ಲು ತೂರಾಟ ಪ್ರಕರಣಗಳು: 2016ರಲ್ಲಿ ಕಲ್ಲು ತೂರಾಟದ 89 ಪ್ರಕರಣಗಳು ದಾಖಲಾಗಿರುವ ಹಿಂಸಾತ್ಮಕ ಪ್ರತಿಭಟನೆಗಳನ್ನು ಜಮ್ಮು ಮತ್ತು ಕಾಶ್ಮೀರ ವಿಮೋಚನಾ ರಂಗದ (ಜೆಕೆಎಲ್​ಎ​) ಮುಖ್ಯಸ್ಥ ಮಲ್ಲಿಕ್​ ಪ್ರಚೋದಿಸಿದ್ದ ಎಂದು ಎನ್​ಐಎ ಆರೋಪಿಸಿತ್ತು. ಆತನ ಮನೆ ಮೇಲೆ ದಾಳಿ ಮಾಡಿದಾಗ ಹಿಜ್ಬುಲ್​ ಮುಜಾಹಿದಿನ್​ ಸಂಟನೆಯ ಲೆಟರ್​ಹೆಡ್​ ಸಿಕ್ಕಿದ್ದು ಅದನ್ನು ವಶಪಡಿಸಿಕೊಳ್ಳಲಾಗಿತ್ತು ಎಂದು ಎನ್​ಐಎ ಹೇಳಿದೆ.


Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries