ಕೊಚ್ಚಿ: ಸಿಪಿಐಎಂ ಪಕ್ಷದ ಆಡಳಿತದಲ್ಲಿರುವ ಕಾಂಞಂಗಾಡ್ ಕೋ ಓಪರೇಟಿವ್ ಹಾಸ್ಪಿಟಲ್ ಗೆ ದೇಣಿಗೆಯನ್ನು ಕಾಸರಗೋಡು ಜಿಲ್ಲಾ ಪಂಚಾಯತ್, ಜಿಲ್ಲೆಯ ಮೂರು ಮುನಿಸಿಪಾಲಿಟಿಗಳು,ಬ್ಲಾಕ್ ಪಂಚಾಯತ್ ಗಳು ಹಾಗೂ 38 ಪಂಚಾಯತ್ ಗಳು ದೇಣಿಗೆಯನ್ನು ನೀಡಬೇಕೆಂದು ಕೇರಳದ ಸ್ಥಳೀಯಾಡಳಿತ ಇಲಾಖೆಯು ನಿರ್ದೇಶನವನ್ನು ನೀಡಿದುದರ ವಿರುದ್ಧವಾಗಿ ಕೇರಳ ಹೈಕೋರ್ಟಿನಲ್ಲಿ ಕೇರಳ ರಾಜ್ಯ ಭಾರತೀಯ ಜನತಾ ಪಕ್ಷದ ಕೇರಳ ಕಾರ್ಯದರ್ಶಿ ನ್ಯಾಯವಾದಿ ಕೆ. ಶ್ರೀಕಾಂತ್ ಅವರು ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಪುರಸ್ಕರಿಸಿದ ಕೇರಳ ಹೈಕೋರ್ಟಿನ ಮುಖ್ಯ ನ್ಯಾಯಾಧೀಶರಾದ ಎಸ್ ಮಣಿಕುಮಾರ್ ಹಾಗೂ ನ್ಯಾಯಾಧೀಶ ಶಾಜೀ ಪಿ ಚಾಲಿ ಅವರನ್ನೊಳಗೊಂಡ ನ್ಯಾಯ ಪೀಠವು ಪುರಸ್ಕರಿಸಿ ಕೇರಳ ಸರಕಾರಕ್ಕೆ ಇಲಾಖೆಗೆ ನೋಟೀಸು ಜಾರಿ ಮಾಡಿದೆ.
ರಾಜ್ಯದಲ್ಲಿ ಅಧಿಕಾರದಲ್ಲಿರುವ ಸರ್ಕಾರದೊಂದಿಗಿನ ಅನುಕೂಲಕರ ರಾಜಕೀಯ ಸಮೀಕರಣದ ಲಾಭವನ್ನು ಪಡೆದುಕೊಂಡ ಕಾಂಞಂಗಾಡ್ ಕೋಓಪರೇಟಿವ್ ಹಾಸ್ಪಿಟಲ್ ಸೊಸೈಟಿಯು ಆಸ್ಪತ್ರೆಯನ್ನು ಕಟ್ಟಲು ಕಾಞಂಗಾಡ್ ಪುರಸಭೆಯಿಂದ ರೂ.2 ಕೋಟಿ ರುಪಾಯಿ, ಜಿಲ್ಲೆಯ ಇತರೆ ಪುರಸಭೆಗಳಿಂದ ತಲಾ 50 ಲಕ್ಷ ರುಪಾಯಿ, ಜಿಲ್ಲೆಯ ಬ್ಲಾಕ್ ಪಂಚಾಯತ್ಗಳಿಂದ ತಲಾ 25 ಲಕ್ಷ ಹಾಗೂ ಕಾಸರಗೋಡು ಜಿಲ್ಲಾ ಪಂಚಾಯತ್ನಿಂದ 1 ಕೋಟಿ ರುಪಾಯಿಗಳ ದೇಣಿಗೆ ಹಾಗೂ 38 ಪಂಚಾಯತ್ ಗಳು ಹೀಗೆ ಒಟ್ಟಾಗಿ 24.5 ಕೋಟಿ ರುಪಾಯಿಗಳ ದೇಣಿಗೆ ಕೊಡಲು ಸರಕಾರಕ್ಕೆ ಮನವಿ ಮಾಡಿದುದರ ಪರಿಣಾಮವಾಗಿ ಸ್ಥಳೀಯಾಡಳಿತ ಇಲಾಖೆಯು ಕಾಸರಗೋಡಿನ ಸ್ಥಳೀಯಾಡಳಿತ ಸಂಸ್ಥೆಗಳಿಗೆ ಅನಿಯಮಿತ ದೇಣಿಗೆ ನೀಡಲು ಸೂಚಿಸಿತ್ತು.
ಅರ್ಜಿದಾರರು ಕಾಂಞಂಗಾಡ್ ಕೋಓಪರೇಟಿವ್ ಹಾಸ್ಪಿಟಲ್ ಸೊಸೈಟಿಯು ಖಾಸಗಿ ಸಂಸ್ಥೆಯಾಗಿದ್ದು ಇದಕ್ಕೆ ಸರಕಾರೀ ದೇಣಿಗೆಯನ್ನು ಕೊಡುವಂತೆ ಸ್ಥಳೀಯಾಡಳಿತ ಸಂಸ್ಥೆಗಳಿಗೆ ಸರಕಾರವು ಕಡ್ಡಾಯ ಮಾಡುವಂತಿಲ್ಲ ಎಂದು ಅರ್ಜಿದಾರ ನ್ಯಾಯವಾದಿ. ಕೆ ಶ್ರೀಕಾಂತ್ ಪರವಾಗಿ ನ್ಯಾಯವಾದಿ ಪಿ ಸಜಿತ್ ಕುಮಾರ್ ಅವರು ವಾದ ಮಂಡಿಸಿದ್ದರು.