ವಯನಾಡ್: ಡಿಸಿಸಿ ಕಚೇರಿಗೆ ಪೋಲೀಸ್ ರಕ್ಷಣೆ ಅಗತ್ಯವಿಲ್ಲ ಎಂದು ಕಾಂಗ್ರೆಸ್ ಹೇಳಿದೆ. ಡಿಸಿಸಿ ಕಚೇರಿಗೆ ಆಗಮಿಸಿದಾಗ ಪೋಲೀಸರು ಹಾಗೂ ಕಾಂಗ್ರೆಸ್ ಕಾರ್ಯಕರ್ತರ ನಡುವೆ ಮಾತಿನ ಚಕಮಕಿ ನಡೆಯಿತು. ನಂತರ ಪಕ್ಷದ ಹಿರಿಯ ಮುಖಂಡರು ಡಿಸಿಸಿ ಕಚೇರಿಯಿಂದ ಪೋಲೀಸರನ್ನು ಹೊರಕಳಿಸಿದರು. ಎಸ್ಎಫ್ಐ ಗೂಂಡಾಗಳಿಗೆ ಸಹಾಯ ಮಾಡಲು ಪೋಲೀಸರ ಸಹಾಯ ಬೇಕಿಲ್ಲ ಎಂದು ಮುಖಂಡರು ಪ್ರತಿಕ್ರಿಯಿಸಿದರು. ಪ್ರತಿಭಟನೆಯ ನೇತೃತ್ವವನ್ನು ಐಸಿ ಬಾಲಕೃಷ್ಣನ್ ಮತ್ತು ಟಿ ಸಿದ್ದಿಕ್ ವಹಿಸಿದ್ದರು.
ವಯನಾಡ್ ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ ಅವರ ಕಚೇರಿ ಮೇಲೆ ಎಸ್ಎಫ್ಐ ಗೂಂಡಾಗಳು ದಾಳಿ ನಡೆಸಿದ ಹಿನ್ನೆಲೆಯಲ್ಲಿ ಇಂದು ಕಾಂಗ್ರೆಸ್ ಪ್ರತಿಭಟನೆ ನಡೆಸಿತು. ಕಚೇರಿಗೆ ಭೇಟಿ ನೀಡಿದ ಪ್ರತಿಪಕ್ಷ ನಾಯಕ ವಿ.ಡಿ.ಸತೀಶ ಮಾಧ್ಯಮದವರೊಂದಿಗೆ ಆಕ್ರೋಶಭರಿತರಾಗಿ ಮಾತನಾಡಿದರು. ಎಸ್ಎಫ್ಐ ಹಿಂಸಾಚಾರದ ನಂತರ ಕಚೇರಿಯಲ್ಲಿ ಗಾಂಧೀಜಿ ಅವರ ಚಿತ್ರ ಬಿದ್ದಿದೆಯೇ ಎಂಬ ಪ್ರಶ್ನೆಯನ್ನು ಮಾಧ್ಯಮಗಳು ಎತ್ತಿದವು. ಇದರ ವಿರುದ್ಧ ವಿ.ಡಿ.ಸತೀಶನ್ ಆಕ್ರೋಶದಿಂದ ಮಾತನಾಡಿದರು.
ಡಿಸಿಸಿ ಕಚೇರಿಯ ಹೊರಭಾಗದಲ್ಲಿ ಭಾರಿ ಪೆÇಲೀಸ್ ಬಂದೋಬಸ್ತ್ ಮಾಡಿರುವುದು ಕಂಡುಬಂತು. ಇದರೊಂದಿಗೆ ಪಕ್ಷದ ಮುಖಂಡರೇ ಪೆÇಲೀಸರನ್ನು ಹೊರಗೆ ಬರುವಂತೆ ಸೂಚಿಸಿದರು. ನಂತರ ಪೆÇಲೀಸರನ್ನು ಗೇಟ್ನಿಂದ ಹೊರಕ್ಕೆ ಕಳಿಸಲಾಯಿತು.
ಸಹಾಯ ಬೇಕಾದಾಗ ಪೆÇಲೀಸರು ಸಹಾಯ ಮಾಡಿಲ್ಲ, ಈಗ ಬೇಕಿಲ್ಲ ಎನ್ನುತ್ತಾರೆ ಮುಖಂಡರು. ಎಸ್ಎಫ್ಐ ಗೂಂಡಾಗಳು ದಾಳಿ ಮಾಡಲು ಬರುತ್ತಿದ್ದಾರೆ ಎಂದು ಡಿಸಿಸಿ ಅಧ್ಯಕ್ಷರು ಡಿವೈಎಸ್ಪಿಗೆ ಮೊದಲೇ ಮಾಹಿತಿ ನೀಡಿದ್ದರು. ಆದರೆ ಪೋಲೀಸರು ಸಮಯಕ್ಕೆ ಸರಿಯಾಗಿ ಬರಲು ಅಥವಾ ದಾಳಿಯನ್ನು ತಪ್ಪಿಸಲು ಸಾಧ್ಯವಾಗಲಿಲ್ಲ. ಬದಲಾಗಿ ಎಸ್ಎಫ್ಐ ಗೂಂಡಾಗಳಿಗೆ ಸಹಾಯ ಮಾಡಿದ್ದಾರೆ ಎಂದು ಮುಖಂಡರು ಆರೋಪಿಸಿದ್ದಾರೆ. ಡಿಸಿಸಿ ಕಚೇರಿಯ ಗೇಟ್ ಒಳಗೆ ಹೋಗದಂತೆ ಮುಖಂಡರು ಪೋಲೀಸರಿಗೆ ಎಚ್ಚರಿಕೆ ನೀಡಿದರು.