ನವದೆಹಲಿ: ಎಲ್ಲೆಂದರಲ್ಲಿ ಪಾರ್ಕಿಂಗ್ ಮಾಡಿ ಸಮಸ್ಯೆ ಉಂಟುಮಾಡುವ ವಾಹನ ಸವಾರರೆ ಎಚ್ಚರ, ಇನ್ಮೇಲೆ ಬೇಕಾಬಿಟ್ಟಿ ಪಾರ್ಕಿಂಗ್ಗೆ ಕಡಿವಾಣದ ಹಾಕಲು ಕೇಂದ್ರ ಸರ್ಕಾರ ಹೊಸ ನಿಯಮ ಜಾರಿಗೆ ತರಲು ಮುಂದಾಗಿದೆ.
ನವದೆಹಲಿ: ಎಲ್ಲೆಂದರಲ್ಲಿ ಪಾರ್ಕಿಂಗ್ ಮಾಡಿ ಸಮಸ್ಯೆ ಉಂಟುಮಾಡುವ ವಾಹನ ಸವಾರರೆ ಎಚ್ಚರ, ಇನ್ಮೇಲೆ ಬೇಕಾಬಿಟ್ಟಿ ಪಾರ್ಕಿಂಗ್ಗೆ ಕಡಿವಾಣದ ಹಾಕಲು ಕೇಂದ್ರ ಸರ್ಕಾರ ಹೊಸ ನಿಯಮ ಜಾರಿಗೆ ತರಲು ಮುಂದಾಗಿದೆ.
ಯಾರಾದರೂ ವಾಹನ ಸವಾರರು ನೋ ಪಾರ್ಕಿಂಗ್ ಅಥವಾ ಜನನಿಬಿಡ ಸ್ಥಳದಲ್ಲಿ ಯರ್ರಾಬಿರ್ರಿಯಾಗಿ ವಾಹನ ನಿಲ್ಲಿಸಿದ್ದರೆ, ಅಂತಹದ್ದನ್ನು ಜನರು ಫೋಟೋ ತೆಗೆದು ಅದನ್ನು ಟ್ರಾಫಿಕ್ ಪೊಲೀಸ್ ಇಲಾಖೆಗೆ ಕಳುಹಿಸಬೇಕು.
ಈ ಬಗ್ಗೆ ಕಾರ್ಯಕ್ರಮವೊಂದರಲ್ಲಿ ಮಾತನಾಡಿರುವ ಕೇಂದ್ರ ಸಚಿವ ನಿತಿನ್ ಗಡ್ಕರಿ, ಪಾರ್ಕಿಂಗ್ ಸಮಸ್ಯೆ ನಿವಾರಣೆಗೆ ಕೇಂದ್ರ ಸರ್ಕಾರ ವಿನೂತನ ಉಪಾಯ ಮಾಡಿದೆ ಎಂದು ವಿವರಿಸಿದರು. ಈ ರೀತಿಯ ನಿಯಮವನ್ನು ಜಾರಿ ಮಾಡಲು ಸರ್ಕಾರ ಕಾನೂನು ತರಲಿದೆ. ಆಗ ಮಾತ್ರ ಪಾರ್ಕಿಂಗ್ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಸಾಧ್ಯವಾಗಲಿದೆ. ಕೆಲ ಸವಾರರು ತಮ್ಮ ವಾಹನವನ್ನು ಪಾರ್ಕಿಂಗ್ ಸ್ಥಳಗಳಲ್ಲಿ ನಿಲ್ಲಿಸುವ ಬದಲು ರಸ್ತೆ ಪಕ್ಕದಲ್ಲೇ ನಿಲ್ಲಿಸುವ ಚಾಳಿ ಹೊಂದಿದ್ದಾರೆ ಎಂದು ಗಡ್ಕರಿ ಹೇಳಿದರು.