ವಾರಣಾಸಿ: ಗ್ಯಾನ್ ವಾಪಿ ಮಸೀದಿಯ ಆವರಣದಲ್ಲಿರುವ ಶಿವಲಿಂಗಕ್ಕೆ ಶನಿವಾರ (ಜೂ.04)ರಂದು ಪೂಜೆ ಸಲ್ಲಿಸಲಿದ್ದೆವೆ ಎಂದು ಶಂಕರಾಚಾರ್ಯ ಸ್ವಾಮಿ ಸ್ವರೂಪಾನಂದ ಸರಸ್ವತಿ ಅವರ ಶಿಷ್ಯ ಅವಿಮುಕ್ತೇಶ್ವರಾನಂದ ಸರಸ್ವತಿ ಹೇಳಿದ್ದಾರೆ.
ಆಡಳಿತ ನಮ್ಮನ್ನು ಪೂಜೆ ಸಲ್ಲಿಸುವುದರಿಂದ ತಡೆದರೆ, ಅದನ್ನು ಶಂಕರಾಚಾರ್ಯ ಸ್ವರೂಪಾನಂದ ಸರಸ್ವತಿ ಅವರಿಗೆ ತಿಳಿಸುತ್ತೇವೆ, ಅವರ ಸೂಚನೆಗಳನ್ನು ಪಾಲಿಸುತ್ತೇವೆ ಎಂದು ಅವಿಮುಕ್ತೇಶ್ವರಾನಂದ ಸರಸ್ವತಿ ತಿಳಿಸಿದ್ದಾರೆ.
ಸ್ವಾಮಿ ಸ್ವರೂಪಾನಂದ ಸರಸ್ವತಿ ಗುಜರಾತ್ ನಲ್ಲಿರುವ ದ್ವಾರಕಾ ಶಾರದಾ ಪೀಠ ಹಾಗೂ ಬದ್ರಿನಾಥ್ ನಲ್ಲಿರುವ ಜ್ಯೋತಿರ್ಮಠದ ಶಂಕರಾಚಾರ್ಯರಾಗಿದ್ದಾರೆ.
ಧರ್ಮದ ವಿಷಯದಲ್ಲಿ ಧರ್ಮಾಚಾರ್ಯರ ನಿರ್ಧಾರವೇ ಅಂತಿಮ. ಕಾನೂನನ್ನು ಸುಪ್ರೀಂ ಕೋರ್ಟ್ ವ್ಯಾಖ್ಯಾನಿಸುವಂತೆ, ಧರ್ಮವನ್ನು ಧರ್ಮಾಚಾರ್ಯರು ವ್ಯಾಖ್ಯಾನಿಸುತ್ತಾರೆ. ಸನಾತನ ಧರ್ಮದಲ್ಲಿ ಶಂಕರಾಚಾರ್ಯರು ಪರಮೋಚ್ಛ ಆಚಾರ್ಯರಾಗಿದ್ದು, ಈ ಪೈಕಿ ಸ್ವರೂಪಾನಂದ ಸರಸ್ವತಿ ಹಿರಿಯರಾಗಿದ್ದಾರೆ ಗ್ಯಾನ್ ವಾಪಿಯಲ್ಲಿ ಭಗವಾನ್ ವಿಶ್ವನಾಥ ಇದ್ದಾನೆ. ಹಿಂದೂ ಸಮುದಾಯದ ಪರವಾಗಿ ಪೂಜೆ ಸಲ್ಲಿಸಲು ಸಿದ್ಧತೆ ನಡೆಸುತ್ತಿದ್ದೆವೆ, ನಾವು ರಾಜಕೀಯ ಹಿಂದೂಗಳಲ್ಲ ನಿಜವಾದ ಹಿಂದೂಗಳು ಎಂದು ವರದಿಗಾರರಿಗೆ ಅವಿಮುಕ್ತೇಶ್ವರಾನಂದ ಸರಸ್ವತಿ ಹೇಳಿದ್ದಾರೆ.