ಭವಾನಿ ಪಟ್ಟಣ : 'ಒಡಿಶಾದ ಕಾಳಹಂಡಿ ಜಿಲ್ಲೆಯಲ್ಲಿ ನಕ್ಸಲರ ಅಡಗುತಾಣವೊಂದನ್ನು ಭೇದಿಸಲಾಗಿದ್ದು, 22 ಜೀವಂತ ಮದ್ದುಗುಂಡುಗಳು ಹಾಗೂ ಶಸ್ತ್ರಾಸ್ತ್ರಗಳನ್ನು ಜಪ್ತಿ ಮಾಡಲಾಗಿದೆ' ಎಂದು ಪೊಲೀಸ್ ವರಿಷ್ಠಾಧಿಕಾರಿ ಅಭಿಲಾಶ್ ಜಿ.ತಿಳಿಸಿದರು.
0
samarasasudhi
ಜೂನ್ 26, 2022
ಭವಾನಿ ಪಟ್ಟಣ : 'ಒಡಿಶಾದ ಕಾಳಹಂಡಿ ಜಿಲ್ಲೆಯಲ್ಲಿ ನಕ್ಸಲರ ಅಡಗುತಾಣವೊಂದನ್ನು ಭೇದಿಸಲಾಗಿದ್ದು, 22 ಜೀವಂತ ಮದ್ದುಗುಂಡುಗಳು ಹಾಗೂ ಶಸ್ತ್ರಾಸ್ತ್ರಗಳನ್ನು ಜಪ್ತಿ ಮಾಡಲಾಗಿದೆ' ಎಂದು ಪೊಲೀಸ್ ವರಿಷ್ಠಾಧಿಕಾರಿ ಅಭಿಲಾಶ್ ಜಿ.ತಿಳಿಸಿದರು.
ಕಳೆದ ಗುರುವಾರ ಭವಾನಿಪಟ್ಟಣ ಉಪವಿಭಾಗದ ರಾಂಪುರ ಬ್ಲಾಕ್ನಲ್ಲಿ ವಿಶೇಷ ಕಾರ್ಯಾಚರಣೆ ಗುಂಪು ಮತ್ತು ಒಡಿಶಾ ಪೊಲೀಸ್ನ ಜಿಲ್ಲಾ ಸ್ವಯಂಸೇವಾ ಪಡೆ ನಕ್ಸಲ್ ಶಿಬಿರವನ್ನು ಭೇದಿಸಿದ ನಂತರ ಈ ಕ್ರಮ ಕೈಗೊಳ್ಳಲಾಗಿದೆ.
'ಮುಂಡಮುಸ್ಕಾ ಮೀಸಲು ಅರಣ್ಯದಲ್ಲಿನ ಅಡಗುತಾಣವನ್ನು ಶನಿವಾರ ಶೋಧ ಕಾರ್ಯಾಚರಣೆಯ ವೇಳೆ ಪತ್ತೆಹಚ್ಚಲಾಯಿತು. ಎರಡು ಸುಧಾರಿತ ಸ್ಫೋಟಕ ಸಾಧನಗಳು ಮತ್ತು ಡಿಟೋನೇಟರ್ಗಳನ್ನು ವಶಪಡಿಸಿಕೊಳ್ಳಲಾಗಿದೆ. ಈ ಪ್ರದೇಶದಲ್ಲಿ ಹಿರಿಯ ನಕ್ಸಲ್ ನಾಯಕ ಇದ್ದಿರಬಹುದು' ಎಂದು ಪೊಲೀಸರು ಶಂಕಿಸಿದ್ದಾರೆ.