HEALTH TIPS

ಕುಟುಂಬಶ್ರೀ ಹೋಟೆಲ್ ಗೆ ದಾಳಿ: ಯುವಕನ ಆಟೋಪ

                     ಪಾಲಕ್ಕಾಡ್: ಮದ್ಯದ ಅಮಲಿನಲ್ಲಿ ಕುಟುಂಬಶ್ರೀ ಹೋಟೆಲ್‍ಗೆ ಯುವಕನೊಬ್ಬ ನುಗ್ಗಿ ಜಖಂಗೊಳಿಸಿದ ಘಟನೆ ನಡೆದಿದೆ.  ಪಾಲಕ್ಕಾಡ್‍ನ ಚೆರ್ಪುಲಸ್ಸೆರಿಯಲ್ಲಿ ಈ ಘಟನೆ ನಡೆದಿದೆ.

ನೆಲ್ಲಾ ಮೂಲದ ಅಬ್ದುಲ್ ನಾಸರ್ ಎಂಬಾತ ಹೋಟೆಲ್ ಮೇಲೆ ದಾಳಿ ನಡೆಸಿದವ. ಹೋಟೆಲ್ ಗೆ  ಊಟ ಮಾಡಲು ಬಂದಿದ್ದ ವ್ಯಕ್ತಿಯೊಬ್ಬರು ದಾಳಿಯಲ್ಲಿ ಗಾಯಗೊಂಡಿದ್ದಾರೆ. ಆರೋಪಿಯನ್ನು ಪೋಲೀಸರು ಬಂಧಿಸಿದ್ದಾರೆ.

                    ಚೆರ್ಪುಳಸ್ಸೆರಿ ಬಸ್ ನಿಲ್ದಾಣದ ಹಿಂಭಾಗದಲ್ಲಿ ಕಾರ್ಯಾಚರಿಸುತ್ತಿರುವ ಮಹಿಮಾ ಕುಟುಂಬಶ್ರೀ ಹೋಟೆಲ್ ಮೇಲೆ ಅಬ್ದುಲ್ ನಾಸರ್ ದಾಳಿ ನಡೆಸಿದ್ದಾನೆ. ಮೊದಲು ಊಟ ಮಾಡಲು ಬಂದ ಆರೋಪಿ ಮಹಿಳೆಯರನ್ನು ಕೆಟ್ಟದಾಗಿ ನಡೆಸಿಕೊಂಡಿದ್ದಾನೆ. ಅವರನ್ನು ವಿಚಾರಿಸಿದಾಗ ಹೊಟೇಲ್‍ನಲ್ಲಿದ್ದ ಮತ್ತೊಬ್ಬ ವ್ಯಕ್ತಿಗೆ ಹಲ್ಲೆಗೈಯ್ಯಲಾಯಿತು. 

                  ನಂತರ ಹೋಟೆಲ್‍ನ ಇತರ ವಸ್ತುಗಳನ್ನೂ ನಾಶಪಡಿಸಿ ಧ್ವಂಸಗೊಳಿಸಲಾಯಿತು. ಚೆರ್ಪುಳಸ್ಸೆರಿ ಪೋಲೀಸರು ಆರೋಪಿ ವಿರುದ್ಧ ಗೂಂಡಾ ಕಾಯ್ದೆಯಡಿ ಪ್ರಕರಣ ದಾಖಲಿಸಿರುವರು. 


Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries