ಕಣ್ಣೂರು: ಸಚಿವ ಸಾಜಿ ಚೆರಿಯನ್ ಬಳಿಕ ಸಿಪಿಎಂ ಪಾಲಿಟ್ ಬ್ಯುರೊ ಸದಸ್ಯೆ ವೃಂದಾ ಕಾರಟ್ ಅವರು ಸಂವಿಧಾನಕ್ಕೆ ಅವಮಾನ ಮಾಡಿದ್ದಾರೆ. ಭಾರತೀಯ ಸಂವಿಧಾನವು ನಾಗರಿಕರ ಹಲವು ಮೂಲಭೂತ ಹಕ್ಕುಗಳನ್ನು ಗುರುತಿಸಿಲ್ಲ ಎಂದು ವೃಂದಾ ಕಾರಟ್ ಹೇಳಿದ್ದಾರೆ. ಕಣ್ಣೂರು ವಿಶ್ವವಿದ್ಯಾನಿಲಯದ ವಿದ್ಯಾರ್ಥಿ ಸಂಘದ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಅವರು ಸಂವಿಧಾನಕ್ಕೆ ಅಪಮಾನ ಮಾಡಿದ್ದಾರೆ.
ಸಂವಿಧಾನ ರಚನೆಯಾದಾಗ ನಾಗರಿಕರ ಹಲವು ಮೂಲಭೂತ ಹಕ್ಕುಗಳು ಮಾರ್ಗದರ್ಶಕ ತತ್ವಗಳಿಗೆ ಸೀಮಿತವಾಗಿತ್ತು. ಸದ್ಯದ ಪರಿಸ್ಥಿತಿ ಏನೆಂದರೆ ಸಂವಿಧಾನವನ್ನು ರಕ್ಷಿಸುವ ಪ್ರಮುಖ ಶಕ್ತಿ ನಾವೇ. ಆದರೆ ಬಲಪಂಥೀಯರಿಂದ ನಾವು ರಕ್ಷಿಸಬೇಕಾದ ಸಂವಿಧಾನವು ಕೆಲಸ ಮಾಡುವ ಹಕ್ಕು ಸೇರಿದಂತೆ ಮೂಲಭೂತ ಹಕ್ಕುಗಳನ್ನು ಗುರುತಿಸಿಲ್ಲ ಎಂಬುದನ್ನು ಮರೆಯಬಾರದು ಎಂದಿರುವರು.
ವಿದ್ಯಾರ್ಥಿಗಳು, ಪ್ರಗತಿಪರ ಶಕ್ತಿಗಳು ಮತ್ತು ಸಾರ್ವಜನಿಕರ ಸುದೀರ್ಘ ಹೋರಾಟದ ನಂತರ ಶಿಕ್ಷಣವನ್ನು ಸಂವಿಧಾನದಲ್ಲಿ ಮೂಲಭೂತ ಹಕ್ಕಾಗಿ ಸೇರಿಸಲಾಯಿತು. ಅದರ ನಂತರ, ಶಿಕ್ಷಣದ ಹಕ್ಕನ್ನು ವರ್ಷಗಳ ನಂತರ ಜಾರಿಗೊಳಿಸಲಾಯಿತು. ಈಗಿರುವ ಕೆಲವು ಹಕ್ಕುಗಳನ್ನೂ ತೆಗೆದುಹಾಕಲಾಗುತ್ತಿದೆ ಎಂದು ವೃಂದಾ ಕಾರಟ್ ಹೇಳಿದ್ದಾರೆ.