ಕಣ್ಣೂರು: ಸಾರಿಗೆ ಸಚಿವ ಆಂಟನಿ ರಾಜು ಅವರು ಇಂದು ಪಾಲ್ಗೊಂಡಿದ್ದ ಕಾರ್ಯಕ್ರಮಕ್ಕೆ ಕಾರ್ಮಿಕ ಸಂಘಟನೆಗಳು ಬಹಿಷ್ಕಾರ ಹಾಕಿವೆ. ಸಂಘಗಳ ವಿರುದ್ಧ ಸಚಿವರ ಹೇಳಿಕೆ ವಿರೋಧಿಸಿ ಕಾರ್ಯಕ್ರಮ ಬಹಿಷ್ಕರಿಸಲಾಗಿದೆ. ಕಣ್ಣೂರಿನಲ್ಲಿ ನಡೆದ ಕಾರ್ಯಕ್ರಮದಿಂದ ಸಿಐಟಿಯು ಸೇರಿದಂತೆ ಕಾರ್ಮಿಕ ಸಂಘಟನೆಗಳು ದೂರ ಉಳಿದಿದ್ದವು.
ಕಣ್ಣೂರಿನ ಕೆ ಎಎಸ್ ಆರ್ ಟಿ ಸಿ ಡಿಪೆÇೀ ಯಾರ್ಡ್ ಉದ್ಘಾಟನೆಗೆ ಸಚಿವರು ಬಂದಿದ್ದರು. ಆದರೆ ಕಾರ್ಮಿಕ ಸಂಘಟನೆಗಳು ಕಾರ್ಯಕ್ರಮದಲ್ಲಿ ಭಾಗವಹಿಸಿರಲಿಲ್ಲ.
ಇದೇ ವೇಳೆ ಬಹಿಷ್ಕಾರ ಹಾಕಿರುವುದು ಗಮನಕ್ಕೆ ಬಂದಿಲ್ಲ ಎಂದು ಕಾರ್ಯಕ್ರಮದ ಬಳಿಕ ಸಾರಿಗೆ ಸಚಿವರು ಪ್ರತಿಕ್ರಿಯಿಸಿದರು. ಕಾರ್ಮಿಕರಿಗೆ ಬಹಿಷ್ಕಾರ ಹಾಕುವ ಹಕ್ಕಿದೆ. ತಮ್ಮ ಕಡೆಯಿಂದ ಕಾರ್ಮಿಕ ಸಂಘಟನೆಗಳಿಗೆ ಅಗೌರವ ತೋರುವ ಧೋರಣೆ ಇಲ್ಲ ಎಂದು ಸಚಿವರು ಸ್ಪಷ್ಟಪಡಿಸಿದರು.