ಎರ್ನಾಕುಳಂ: ಅಲುವಾ ರೈಲ್ವೇ ಮೇಲ್ಸೇತುವೆಯ ಮಧ್ಯದಲ್ಲಿ ಕೆಟ್ಟು ನಿಂತ ಕೆ.ಎಸ್.ಆರ್.ಟಿ.ಸಿ. ಬಸ್ ಅನ್ನು ಶಾಲಾ ವಿದ್ಯಾರ್ಥಿಗಳು ತಳ್ಳುತ್ತಿರುವ ಪೋಟೋ ವೈರಲ್ ಆಗಿದೆ. ಪರವೂರಿನಿಂದ ಅಲುವಾ ಕಡೆಗೆ ತೆರಳುತ್ತಿದ್ದ ಕೆ.ಎಸ್.ಆರ್.ಟಿ.ಸಿ. ಸಾಮಾನ್ಯ ಬಸ್ ದಾರಿಯಲ್ಲಿ ಕೆಟ್ಟು ನಿಂತಿತು. ನಿನ್ನೆ ಸಂಜೆ ಟೌನ್ ಹಾಲ್ ಮುಂಭಾಗದ ಬೆಟ್ಟ ಹತ್ತುವಾಗ ಈ ಘಟನೆ ನಡೆದಿದೆ.
ಬಳಿಕ ಕಂಡಕ್ಟರ್ ಮತ್ತು ಡ್ರೈವರ್ ಹಲವು ತಂತ್ರಗಳನ್ನು ಪ್ರಯತ್ನಿಸಿದರೂ ಬಸ್ ಸ್ಟಾರ್ಟ್ ಆಗಲಿಲ್ಲ. ಸೇತುವೆಯ ಮಧ್ಯದಲ್ಲಿ ಬಸ್ ಸಿಲುಕಿದ್ದರಿಂದ ನಗರದಲ್ಲಿ ಟ್ರಾಫಿಕ್ ಜಾಮ್ ಉಂಟಾಯಿತು. ದರ ಪಕ್ಕದಲ್ಲೇ ಸ್ಟ್ಯಾಂಡ್ ಇದ್ದ ಕಾರಣ ತಾಳ್ಮೆ ಕಳೆದುಕೊಂಡ ಬಹುತೇಕ ಪ್ರಯಾಣಿಕರು ಇಳಿದು ತೆರಳಿದರು. ಪರಿಸರದ ನಾಗರಿಕರಲ್ಲಿ ಕೆಲವರು ಬಸ್ ತಳ್ಳಲು ಯತ್ನಿಸಿದರಾದರೂ ವಿಫಲವಾಯಿತು.
ಇದೇ ವೇಳೆ ಎಸ್.ಎನ್.ಡಿ.ಪಿ. ಶಾಲೆಯ ವಿದ್ಯಾರ್ಥಿಗಳು ತರಗತಿ ಮುಗಿಸಿ ಬರುತ್ತಿದ್ದಾಗ ಈ ದೃಶ್ಯ ಗಮನಿಸಿ ಬಸ್ ಅನ್ನು ತಳ್ಳಿದರು. ಮಕ್ಕಳು ಕೇಕೆ ಹಾಕುತ್ತಾ ಬಸ್ಸನ್ನು ತಳ್ಳಿ ಚಾಲನೆಗೊಳಿಸುವಲ್ಲಿ ಯಶಸ್ವಿಯಾದರು. ನಂತರ ಚಾಲಕ ಬಸ್ಸನ್ನು ಟೌನ್ ಹಾಲ್ ಮುಂಭಾಗದ ಖಾಲಿ ಸ್ಥಳಕ್ಕೆ ಸ್ಥಳಾಂತರಿಸಿ ಸಂಚಾರ ಸುಗಮಗೊಳಿಸಿದರು.