ಕುಂಬಳೆ: ಮೊಗ್ರಾಲ್ಪುತ್ತೂರು ಪಂಚಾಯಿತಿಯ ಕಾವುಗೋಳಿ ಕಡಪ್ಪುರದಲ್ಲಿ ಸಮುದ್ರಕೊರೆತ ತೀವ್ರಗೊಂಡಿದ್ದು, ತಡೆಗೋಡೆ ಕಡಲಬರ್ಗ ಸೇರಿಕೊಂಡಿದೆ. ತಡೆಗೋಡೆ ಇಲ್ಲದ ಸ್ಥಳಗಳಲ್ಲಿ ಸಮುದ್ರಕೊರೆತ ತೀವ್ರಗೊಂಡು ಹಲವಾರು ತೆಂಗಿನ ಮರಗಳು ಧರಾಶಾಯಿಯಾಗಿದೆ. ಕರಾವಳಿ ರಸ್ತೆ ಹೇಳ ಹೆಸರಿಲ್ಲದಂತೆ ನಾಶಗೊಂಡಿದೆ. ಸಮುದ್ರಕೊರೆತದಿಂದ ವ್ಯಾಪಕ ನಾಶನಷ್ಟ ಸಂಭವಿಸಿದೆ. ಜನವಾಸವಿರುವ ಪ್ರದೇಶದಲ್ಲಿ ತಡೆಗೋಡೆ ಕಾಂಗಾರಿ ಪೂರ್ತಿಗೊಳಿಸಲು ಯಾವುದೇ ಕ್ರಮ ಸರಕಾರ ಕೈಗೊಂಡಿಲ್ಲ ಎಂದು ನಾಗರಿಕರು ಆರೋಪಿಸಿದ್ದಾರೆ. ಈ ಬಗ್ಗೆ ಪಂಚಾಯಿತಿ, ಕರಾವಳಿ ಸಂರಕ್ಷಣಾ ಇಲಾಖೆ ಹಾಗೂ ಶಾಸಕರಿಗೆ ನಿರಂತರ ಮನವಿ ಸಲ್ಲಿಸುತ್ತಾ ಬಂದಿದ್ದರೂ, ಪ್ರಯೋಜನವಾಗಿಲ್ಲ ಎಂದು ಸಥಳೀಯರು ದೂರಿದ್ದಾರೆ.