ಕುಂಬಳೆ: ಕುಂಬಳೆ ಶೇಡಿಕಾವು ಶ್ರೀಕೃಷ್ಣ ವಿದ್ಯಾಲಯದಲ್ಲಿ'ಕಾರ್ಗಿಲ್ ವಿಜಯ ದಿವಸ್' ಆಚರಣೆ ನಡೆಯಿತು.
ಕಾರ್ಗಿಲ್ ಕದನದ ವೀರ ಸೈನಿಕರ ತ್ಯಾಗ ಬಲಿದಾನಗಳನ್ನು ಸ್ಮರಿಸುತ್ತಾ ದೇಶದ ರಕ್ಷಣೆ ಮಾಡುವ ಯೋಧರಿಗೆ ನಮನ ಸಲ್ಲಿಸಲಾಯಿತು. ವಿದ್ಯಾರ್ಥಿನಿ ಕುಮಾರಿ ನಮಿಷ ಕಾರ್ಗಿಲ್ ವಿಜಯ ದಿವಸ್ ಕುರಿತಾಗಿ ಭಾಷಣ ಮಾಡಿದರು. ಶಿಕ್ಷಕಿ ತೇಜಸ್ವಿನಿ ಅವರು ರಾಷ್ಟ್ರಪ್ರೇಮ, ವೀರ ಯೋಧರ ಕುರಿತಾಗಿ ಮಾತನಾಡಿದರು.
ವಿದ್ಯಾರ್ಥಿನಿ ಕುಮಾರಿ ತನ್ವಿ ಮತ್ತು ಕುಮಾರಿ ಚೈತನ್ಯ ಎನ್ ಶೆಟ್ಟಿ ಯೋಧರ ಕುರಿತಾಗಿ ಕವನ ವಾಚನ ಮಾಡಿದರು. ಶಾಲಾ ಮುಖ್ಯೋಪಾದ್ಯಾನಿ ಸುನೀತ, ಶಿಕ್ಷಕಿ ಶ್ವೇತಾ ಸಹಿತ ಶಾಲಾ ಶಿಕ್ಷಕಿಯರು ಹಾಗು ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ಶೇಡಿಕಾವು ಶ್ರೀ ಕೃಷ್ಣ ವಿದ್ಯಾಲಯದಲ್ಲಿ ಕಾರ್ಗಿಲ್ ವಿಜಯ ದಿವಸ್ ಆಚರಣೆ
0
July 28, 2022