HEALTH TIPS

ಸಿಪಿಎಂ ಕಾರ್ಯಕರ್ತ ಶಹಜಹಾನ್ ಹತ್ಯೆ ಪ್ರಕರಣ: ಮೂರನೇ ಆರೋಪಿ ನವೀನ್ ಮತ್ತು ಐದನೇ ಆರೋಪಿ ಸಿದ್ಧಾರ್ಥ್ ಬಂಧನ: ಚರ್ಚೆಗೊಳಗಾಗುತ್ತಿರುವ ಫೇಸ್ ಬುಕ್ ಪ್ರೊಫೈಲ್


                          ಪಾಲಕ್ಕಾಡ್: ಸಿಪಿಎಂ ಕಾರ್ಯಕರ್ತ ಶಹಜಹಾನ್ ಹತ್ಯೆ ಪ್ರಕರಣದಲ್ಲಿ ಮೂರನೇ ಆರೋಪಿ ನವೀನ್ ಮತ್ತು ಐದನೇ ಆರೋಪಿ ಸಿದ್ಧಾರ್ಥ್ ನನ್ನು ಪೋಲೀಸರು ಬಂಧಿಸಿದ್ದಾರೆ.
               ಒಬ್ಬನನ್ನು ಪಟ್ಟಾಂಬಿಯಿಂದ ಮತ್ತು ಇನ್ನೊಬ್ಬನನ್ನು ಪೊಳ್ಳಾಚಿಯಿಂದ ಪೋಲೀಸರು ಬಂಧಿಸಿದ್ದಾರೆ. ಪೋಲೀಸರು ಬಂಧಿತರನ್ನು ವಿಚಾರಣೆ ನಡೆಸುತ್ತಿದ್ದಾರೆ.
                    ಏತನ್ಮಧ್ಯೆ, ಮೊದಲ ಆರೋಪಿ ಶಬರೀಶ್ ಮತ್ತು ಎರಡನೇ ಆರೋಪಿ ಅನೀಶ್‍ಗಾಗಿ ಶೋಧ ಕಾರ್ಯ ಪ್ರಗತಿಯಲ್ಲಿದೆ ಎಂದು ಪೋಲೀಸರು ಮಾಹಿತಿ ನೀಡಿದ್ದಾರೆ. ಮೂರನೇ ಆರೋಪಿ ನವೀನ್ ಹಾಗೂ ಮೊದಲ ಇಬ್ಬರು ಆರೋಪಿಗಳು ಷಹಜಹಾನ್ ಗೆ ಕಡಿಯುವುದಾಗಿ ಬೆದರಿಕೆ ಹಾಕಿದ್ದರು. ಪ್ರಕರಣದಲ್ಲಿ ನವೀನ್ ಅವರ ಸ್ಪಷ್ಟ ಪಾತ್ರ ಇರುವುದು ಸಾಬೀತಾಗಿರುವುದರಿಂದ ಅವರ ಫೇಸ್ ಬುಕ್ ಪ್ರೊಫೈಲ್ ಚರ್ಚೆಯಾಗುತ್ತಿದೆ.
                ಕೊಲೆಯಾದ ದಿನ ಬೆಳಗ್ಗೆ ನವೀನ್ ತಮ್ಮ ಪಕ್ಷದ ನಾಯಕ ಕೊಡಿಯೇರಿ ಬಾಲಕೃಷ್ಣನ್ ಎಂದು ಫೇಸ್ ಬುಕ್ ನಲ್ಲಿ ಪೋಸ್ಟ್ ಮಾಡಿದ್ದ. ನವೀನ್ ಪಕ್ಷದ ಕಾರ್ಯಕರ್ತನಲ್ಲ ಮತ್ತು ಬಿಜೆಪಿಗೆ ಸಂಬಂಧಿಸಿದ್ದಾನೆ ಎಂದು ಸಿಪಿಎಂ ಸ್ಥಾಪಿಸಲು ಪ್ರಯತ್ನಿಸುತ್ತಿದೆ, ಆರೋಪಿಯ ಸಾಮಾಜಿಕ ಮಾಧ್ಯಮ ಪ್ರೊಫೈಲ್‍ಗಳು ಪಕ್ಷದ ಸಂಬಂಧವನ್ನು ಸ್ಪಷ್ಟಪಡಿಸುತ್ತವೆ.
               ಕೊಡಿಯೇರಿ ಬಾಲಕೃಷ್ಣನ್ ಅವರಲ್ಲದೆ, ವಿಎಸ್ ಅಚ್ಯುತಾನಂದನ್ ಮತ್ತು ಬಿನೀಶ್ ಕೊಡಿಯೇರಿ ಅವರೊಂದಿಗಿನ ಚಿತ್ರಗಳನ್ನು ಫೇಸ್‍ಬುಕ್‍ನಲ್ಲಿ ಹಂಚಿಕೊಂಡಿದ್ದಾನೆ. ಅಲ್ಲದೆ, ಫೇಸ್ ಬುಕ್ ನಲ್ಲಿ ಪಿಣರಾಯಿ ವಿಜಯನ್, ಎಂ.ಎಂ.ಮಣಿ, ಥಾಮಸ್ ಐಸಾಕ್, ಸಾಜಿ ಚೆರಿಯನ್, ಕೆ.ಕೆ.ಶೈಲಜಾ, ಮಲಂಬುಳ ಶಾಸಕ ಪ್ರಭಾಕರನ್, ಸಿಪಿಎಂ ಪುದುಶೇರಿ ಕ್ಷೇತ್ರ ಕಾರ್ಯದರ್ಶಿ ಸುಭಾμï ಚಂದ್ರ  ಮೊದಲಾದವರನ್ನು ಹೊಗಳಿರುವ ಪೋಸ್ಟ್ ಗಳನ್ನು ನೋಡಬಹುದು. ಇನ್ನೊಂದು ಗಮನಾರ್ಹ ಅಂಶವೆಂದರೆ ನವೀನ್ ಬಿಜೆಪಿಯನ್ನು ಟೀಕಿಸಿ ಫೇಸ್ ಬುಕ್ ನಲ್ಲಿ ಕಾಮೆಂಟ್ ಹಾಕಿದ್ದಾನೆ. ಇದೆಲ್ಲದರ ಜೊತೆಗೆ ನವೀನ್ ನ ಫೇಸ್ ಬುಕ್ ಬಯೋದಲ್ಲಿ ತಾನು  ಕಮ್ಯುನಿಸ್ಟ್ ಎಂದು ನಮೂದಿಸಿರುವುದು ಉಲ್ಲೇಖನೀಯ.
              ಮೂರನೇ ಆರೋಪಿ ನವೀನ್ ಸಿಪಿಎಂ ಜೊತೆಗಿನ ಸಂಬಂಧವನ್ನು ತೋರಿಸುವ ಚಿತ್ರಗಳು ನಿನ್ನೆ  ಬಿಡುಗಡೆಯಾಗಿದ್ದವು. ಆದರೆ ಷಹಜಹಾನ್‍ನನ್ನು ಕೊಂದವರು ಸಿಪಿಎಂ ಸದಸ್ಯರಲ್ಲ ಎಂದು ಪಕ್ಷದ ನಾಯಕತ್ವ ದೃಢವಾಗಿ ಹೇಳಿತ್ತು. ಪೋಲೀಸರಿಂದ ಬಂಧನಕ್ಕೊಳಗಾಗಿದ್ದ ನವೀನ್ ಗೂ ಪಕ್ಷಕ್ಕೂ ಸಂಬಂಧವೇ ಇಲ್ಲದಂತೆ ಮಾಡಲು ಸಿಪಿಎಂ ಭಾರೀ ಪ್ರಯತ್ನ ನಡೆಸುತ್ತಿದೆ. ಹತ್ಯೆಗೆ ಆರ್ ಎಸ್ ಎಸ್ ಮುಖಂಡರೇ ಸಹಾಯ ಮಾಡಿದ್ದಾರೆ ಮತ್ತು ಇದರ ಹಿಂದೆ ಆರ್ ಎಸ್ ಎಸ್ ಕೈವಾಡವಿದೆ ಎಂದು ಸಿಪಿಎಂ ಪುನರುಚ್ಚರಿಸುವ ಮೂಲಕ ಹುತಾತ್ಮರನ್ನು ಸೃಷ್ಟಿಸಲು ಪ್ರಯತ್ನಿಸುತ್ತಿರುವುದಾಗಿ ಸಾಮಾಜಿಕ ಜಾಲತಾಣಗಲಲ್ಲಿ ಚರ್ಚೆ ಬಿಸಿಯೇರಿದೆ



 

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries