ತ್ರಿಶೂರ್: ಖಾಸಗಿ ಬಸ್ ರೇಸ್ ನಲ್ಲಿ ಯುವಕನೊಬ್ಬ ತನ್ನದೇ ಬಸ್ ಡಿಕ್ಕಿ ಹೊಡೆದು ಸಾವನ್ನಪ್ಪಿದ ದಾರುಣ ಘಟನೆ ಮೊನ್ನೆ ತ್ರಿಶೂರ್ ನಲ್ಲಿ ನಡೆದಿದೆ. ಆಯಮುಕ್ ಪೊಳಮಕಂಡತ್ ಮನೆಯ ರಾಘವನ್ ಅವರ ಪುತ್ರ ರಾಜೀಶ್ ಮೃತರು.
ಬಸ್ಸಿನೊಳಗೆ ನಿಂತಿದ್ದ ರಾಜೇಶ್ ರಸ್ತೆಗೆ ಬಿದ್ದಿದ್ದು, ಅದೇ ಬಸ್ ಮೈಮೇಲೆ ಸಂಚರಿಸಿ ಈ ಕರುಣಾಜನಕ ಘಟನೆ ನಡೆಯಿತು.
ಸೋಮವಾರ ಸಂಜೆ 6:15 ರ ಸುಮಾರಿಗೆ ಪುತ್ತೇಕ್ಕರ ಕೇಂದ್ರದಲ್ಲಿ ಅಪಘಾತ ಸಂಭವಿಸಿದೆ. ಸ್ಥಳೀಯರು ಗಾಯಾಳು ರಾಜೇಶ್ನನ್ನು ಆಸ್ಪತ್ರೆಗೆ ಕರೆದೊಯ್ದರೂ ರಕ್ಷಿಸಲಾಗಲಿಲ್ಲ.
ವೆನ್ನಿಲಾವ್ ಬಸ್ ಮತ್ತೊಂದು ಖಾಸಗಿ ಬಸ್ ಅನ್ನು ಹಿಂದಿಕ್ಕಲು ಪ್ರಯತ್ನಿಸುತ್ತಿದ್ದಾಗ ಅಪಘಾತ ಸಂಭವಿಸಿದೆ. ಸೋಮವಾರ ಬಸ್ ನಲ್ಲಿ ಕಂಡಕ್ಟರ್ ಆಗಿ ರಾಜೀಶ್ ಇದ್ದರು. ಘಟನೆ ಕುರಿತು ಪೆರಮಂಗಲಂ ಪೋಲೀಸರು ತನಿಖೆ ಆರಂಭಿಸಿದ್ದಾರೆ.
ಬಸ್ಸುಗಳ ಪೈಪೋಟಿಯ ರೇಸಿಂಗ್: ಸ್ವಂತ ಬಸ್ಸಿನ ಚಕ್ರದೆಡೆಗೆ ಸಿಲುಕಿ ಮಾಲೀಕರ ದಾರುಣ ಅಂತ್ಯ
0
August 10, 2022
Tags