ಕಾಸರಗೋಡು: ಸರ್ಕಾರ ಓಣಂ ಹಬ್ಬದ ಅಂಗವಾಗಿ ಉಚಿತವಾಗಿ ವಿತರಿಸಲಿರುವ ಕಿಟ್ನಲ್ಲಿ ಈ ಬಾರಿ ನೀಲೇಶ್ವರದ ಕುಟುಂಬಶ್ರೀ ಘಟಕ ತಯಾರಿಸುವ ಬೆಲ್ಲದ ತಿನಿಸು ಒಳಗೊಳ್ಳಲಿದೆ.
ನಗರಸಭಾ ಕುಟುಂಬಶ್ರೀ ಸಿಡಿಎಸ್ ನೇತೃತ್ವದಲ್ಲಿ ಶ್ರೀಲಕ್ಷ್ಮಿ ಮತ್ತು ಮಹಿಮಾ ಘಟಕಗಳು ಬೆ
ಲ್ಲದ ತಿನಿಸು ತಯಾರಿಸಲಿದೆ. 16000 ಬೆಲ್ಲದ ತಿನಿಸಿನ ಪ್ಯಾಕೆಟ್ಗಳನ್ನು ಈಗಾಗಲೇ ಆರ್ಡರ್ ಮಾಡಲಾಗಿದೆ. ಒಂದು ಪ್ಯಾಕೆಟ್ನಲ್ಗಿ 100ಗ್ರಾಂ ಬೆಲ್ಲದ ತಿನಿಸು ಇರಲಿದ್ದು, ಮಹಿಮಾ ಘಟಕವು 11000 ಪ್ಯಾಕೆಟ್ಗಳನ್ನು ಮತ್ತು ಶ್ರೀಲಕ್ಷ್ಮಿ ಘಟಕವು 5000 ಪ್ಯಾಕೆಟ್ಗಳನ್ನು ಸಿದ್ಧಪಡಿಸಲಿದೆ. ಆಹಾರ ಸುರಕ್ಷಾ ಮಾನದಂಡ ಅನುಸರಿಸಿಕೊಂಡು, ಅತ್ಯಂತ ಭದ್ರತೆಯೊಂದಿಗೆ ಈ ಆಹಾರವಸ್ತುಗಳನ್ನು ತಯಾರಿಸಲಾಗುತ್ತದೆ. ಆಗಸ್ಟ್ 16ರೊಳಗೆ ಬೆಲ್ಲದ ತಿನಿಸಿನ ತಯಾರಿ ಪೂರ್ತಿಗೊಳಿಸಲು ಸಪ್ಲೈಕೋ ಸೂಚಿಸಿದ್ದು, ಓಣಂ ಕಿಟ್ನಲ್ಲಿ ನೀಲೇಶ್ವರ ಕುಟುಂಬಶ್ರೀ ಘಟಕದ ಬೆಲ್ಲದ ತಿನಿಸು ಜಾಗಪಡೆದುಕೊಳ್ಳಲಿದೆ.