HEALTH TIPS

ಮುಲ್ಲಪೆರಿಯಾರ್ ನಲ್ಲಿ ಕೇರಳಕ್ಕೆ ಸಾಂತ್ವನ ಹೇಳಿ ಮುಖ್ಯಮಂತ್ರಿಗೆ ಸ್ಟಾಲಿನ್ ಪತ್ರ: ಅಣೆಕಟ್ಟು ಸುರಕ್ಷಿತ


                 ಚೆನ್ನೈ: ಮುಲ್ಲಪೆರಿಯಾರ್ ಅಣೆಕಟ್ಟಿನ ಬಗ್ಗೆ ಚಿಂತಿಸಬೇಡಿ ಎಂದು ಕೇರಳಕ್ಕೆ ತಮಿಳುನಾಡು ಹೇಳಿದೆ. ಮೊನ್ನೆ ತಮಿಳುನಾಡು ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ ಅವರಿಗೆ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರು ಕಳುಹಿಸಿದ್ದ ಪತ್ರಕ್ಕೆ ಉತ್ತರವಾಗಿ ತಮಿಳುನಾಡು ಈ ಸ್ಪಷ್ಟನೆ ನೀಡಿದೆ.
           ಅಣೆಕಟ್ಟು ಎಲ್ಲ ರೀತಿಯಿಂದಲೂ ಸುರಕ್ಷಿತವಾಗಿದೆ ಎಂದು ಪತ್ರದಲ್ಲಿ ಹೇಳಲಾಗಿದೆ.
          ಕೇರಳದ ಜನರು ಆತಂಕಪಡುವ ಅಗತ್ಯವಿಲ್ಲ. ಮುಲ್ಲಪೆರಿಯಾರ್ ಅಣೆಕಟ್ಟು ಸುರಕ್ಷಿತವಾಗಿದೆ. 2021 ಕೇಂದ್ರ ಜಲ ಆಯೋಗದ ನಿರ್ದೇಶನದ ಪ್ರಕಾರ ನೀರನ್ನು ನಿಯಮ ಕರ್ವ್‍ನಲ್ಲಿ ಇರಿಸುತ್ತದೆ. ಆಗಸ್ಟ್ ಮೊದಲ ವಾರದಲ್ಲಿ, ಅಣೆಕಟ್ಟಿನ ಜಲಾನಯನ ಪ್ರದೇಶದಲ್ಲಿ ಪಡೆದ ಮಳೆಯು ಕೆಳಭಾಗದಲ್ಲಿ ಪಡೆದ ಮಳೆಗಿಂತ ಕಡಿಮೆಯಾಗಿದೆ.
          ಆಗಸ್ಟ್ 4 ರಂದು ಅಣೆಕಟ್ಟಿನ ನೀರಿನ ಮಟ್ಟ 136 ಸೆಂ.ಮೀ. ಇತ್ತು. ಇದರೊಂದಿಗೆ ಸರ್ಕಾರ ಮತ್ತು ಇಡುಕ್ಕಿ ಜಿಲ್ಲಾಧಿಕಾರಿಗಳಿಗೆ ಬೆಳಗ್ಗೆ 7.40ಕ್ಕೆ ಸ್ಪಿಲ್‍ವೇ ಶಟರ್‍ಗಳನ್ನು ತೆರೆಯುವ ಕುರಿತು ಮಾಹಿತಿ ನೀಡಲಾಯಿತು. ಇದರ ಪ್ರಕಾರ ಸೆ.5ರ ಮಧ್ಯಾಹ್ನ ಶೆಟರ್ ತೆರೆಯಲಾಗಿತ್ತು.
         ನಮ್ಮÀ ಅಣೆಕಟ್ಟು ಭದ್ರತಾ ಅಧಿಕಾರಿಗಳು ಯಾವಾಗಲೂ ಕೇರಳದ ಸುರಕ್ಷತೆಯನ್ನು ಖಾತ್ರಿಪಡಿಸುವ ಬಗ್ಗೆ ಕಾಳಜಿ ವಹಿಸುತ್ತಾರೆ. ಕೇರಳದ ಪರಿಸ್ಥಿತಿಯ ಬಗ್ಗೆ ನಿಯಮಿತವಾಗಿ ಮಾಹಿತಿ ನೀಡುತ್ತಿದ್ದಾರೆ ಎಂದೂ ಪತ್ರದಲ್ಲಿ ಹೇಳಲಾಗಿದೆ.




Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries