HEALTH TIPS

ಶಬರಿಮಲೆ ಕಾನನಪಥದ ಮೂಲಕ ಭಕ್ತರ ಪಯಣ; ಹೈಕೋರ್ಟ್ ಮೆಟ್ಟಿಲೇರಲು ಸುಪ್ರೀಂ ಕೋರ್ಟ್ ಆದೇಶ; ಕರೋನಾ ಪರಿಸ್ಥಿತಿ ಬದಲಾದ ನಂತರವೂ ಮುಂದುವರಿದ ನಿರ್ಬಂಧಗಳ ವಿರುದ್ಧ ದೇವಾಲಯದ ಆಚರಣೆಗಳ ಸಂರಕ್ಷಣಾ ಸಮಿತಿಯ ಅರ್ಜಿ ಸಂಬಂಧ ನಿರ್ದೇಶನ

                     ನವದೆಹಲಿ: ಅಯ್ಯಪ್ಪ ಭಕ್ತರಿಗೆ ಸಾಂಪ್ರದಾಯಿಕ ಕಾನನ ಪಥದ ಮೂಲಕ ಶಬರಿಮಲೆ ದರ್ಶನಕ್ಕೆ ಅವಕಾಶ ನೀಡುವುದನ್ನು ಮುಂದುವರಿಸಿರುವ ನಿರ್ಬಂಧದ ವಿರುದ್ಧ ಹೈಕೋರ್ಟ್ ಮೆಟ್ಟಿಲೇರಬಹುದು ಎಂದು ಸುಪ್ರೀಂ ಕೋರ್ಟ್ ಹೇಳಿದೆ.
           ದೇವಾಲಯದ ಧಾರ್ಮಿಕ ಸಂರಕ್ಷಣಾ ಸಮಿತಿ ಸಲ್ಲಿಸಿದ್ದ ಅರ್ಜಿಯ ಮೇರೆಗೆ ನ್ಯಾಯಾಲಯದ ನಿರ್ದೇಶನವಿದೆ.
         ಸದ್ಯದ ಪರಿಸ್ಥಿತಿಯಲ್ಲಿ ಸಂಪ್ರದಾಯದಂತೆ ಕಾನನಪಥದ ಮೂಲಕ ಸಂಚರಿಸಲು ಅವಕಾಶ ನೀಡಬೇಕು ಎಂದು ಕೇರಳ ದೇವಸ್ಥಾನದ ಆಚಾರ ಸಂರಕ್ಷಣಾ ಸಮಿತಿ ಮನವಿಯಲ್ಲಿ ಕೋರಿದೆ. ಅರ್ಜಿದಾರರ ಪರ ವಾದ ಮಂಡಿಸಿದ ವಕೀಲ ಸುವಿದತ್ ಸುಂದರಂ, ಕೊರೊನಾ ಹಿನ್ನೆಲೆಯಲ್ಲಿ ವಿಧಿಸಲಾಗಿದ್ದ ನಿರ್ಬಂಧಗಳನ್ನು ತೆಗೆದುಹಾಕಲಾಗಿದ್ದರೂ ಕಾನನ ಪಥದ ಮೂಲಕ ಪ್ರಯಾಣಕ್ಕೆ ನಿಬರ್ಂಧ ಮುಂದುವರಿದಿದೆ ಎಂದು ನ್ಯಾಯಾಲಯಕ್ಕೆ ತಿಳಿಸಿದರು.
         ಆದರೆ ಕೊರೊನಾ ಪರಿಸ್ಥಿತಿಯಲ್ಲಿ ಬದಲಾವಣೆಯಿಂದಾಗಿ, ಈ ಬಗ್ಗೆ ಹೈಕೋರ್ಟ್ ನಿರ್ಧಾರ ತೆಗೆದುಕೊಳ್ಳಬೇಕಾಗಿದೆ ಮತ್ತು ಆದ್ದರಿಂದ ನ್ಯಾಯಮೂರ್ತಿಗಳಾದ ಅನಿರುದ್ಧ ಬೋಸ್ ಮತ್ತು ವಿಕ್ರಮ್ ನಾಥ್ ಅವರನ್ನೊಳಗೊಂಡ ಪೀಠವು ಹೈಕೋರ್ಟ್ ಅನ್ನು ಸಂಪರ್ಕಿಸಲು ಸೂಚಿಸಿತು. ಶಬರಿಮಲೆಗೆ ಸಂಬಂಧಿಸಿದ ವಿಷಯಗಳ ಬಗ್ಗೆ ನಿರ್ಧರಿಸುವ ಅಧಿಕಾರ ಹೈಕೋರ್ಟ್‍ಗೆ ಇದೆ ಎಂದೂ ಪೀಠ ಪರಿಗಣಿಸಿದೆ.
            ಸಾಂಪ್ರದಾಯಿಕ ಆಚರಣೆಗಳಾದ ಪಂಪಾ ಸ್ನಾನ, ಪಿತೃ ತರ್ಪಣ, ಕಾನನ ಪಥದ ಸಂಚಾರ, ಅಪ್ಪಾಚಿಮೇಟ್ ಮತ್ತು ಶಬರಿ ಪೀಠದಲ್ಲಿ ಅಯ್ಯಪ್ಪ ಭಕ್ತರಿಗೆ ನೈವೇದ್ಯ ಅರ್ಪಣೆ  ಮುಂತಾದ ಸಾಂಪ್ರದಾಯಿಕ ಆಚರಣೆಗಳ ನಿರಾಕರಣೆ ವಿರುದ್ಧ ದೇವಾಲಯದ ಆಚಾರ ಸಂರಕ್ಷಣಾ ಸಮಿತಿ ನ್ಯಾಯಾಲಯದ ಮೆಟ್ಟಿಲೇರಿತ್ತು.




Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries