HEALTH TIPS

'ಯಾವುದೇ ಮಸೂದೆ ಅಂಗೀಕಾರವಾಗಲಿ, ರಾಜಕೀಯ ನೇಮಕಾತಿಗಳಿಗೆ ಅವಕಾಶ ನೀಡುವುದಿಲ್ಲ': ವಿಶ್ವವಿದ್ಯಾಲಯಗಳಲ್ಲಿನ ರಾಜಕೀಯ ನೇಮಕಾತಿಗಳ ಕುರಿತು ಹಠ ಬಿಡದ ರಾಜ್ಯಪಾಲ ಆರಿಫ್ ಮೊಹಮ್ಮದ್ ಖಾನ್


             ತಿರುವನಂತಪುರ: ವಿಶ್ವವಿದ್ಯಾಲಯ ಕಾಯ್ದೆ ತಿದ್ದುಪಡಿ ಮಸೂದೆಗೆ ರಾಜ್ಯಪಾಲ ಆರಿಫ್ ಮುಹಮ್ಮದ್ ಖಾನ್ ಪ್ರತಿಕ್ರಿಯಿಸಿದ್ದಾರೆ. ಕಾನೂನು ರಚನೆಯ ಭಾಗವಾಗಿ ಮಸೂದೆಗಳನ್ನು ಅಂಗೀಕರಿಸುವ ಅಧಿಕಾರ ಶಾಸಕಾಂಗಕ್ಕೆ ಇದೆ ಎಂದಿರುವರು.
            ವಿಷಯ ಸಮಿತಿಗೆ ಬಿಡಬೇಕೇ ಬೇಡವೇ ಎಂಬುದನ್ನು ಅವರು ನಿರ್ಧರಿಸಬಹುದು. ಆದರೆ ರಾಜ್ಯಪಾಲರ ಕರ್ತವ್ಯವೂ ಪ್ರಜಾಸತ್ತಾತ್ಮಕವಾಗಿದೆ ಎಂದು ನೆನಪಿಸಿದರು.
            ಯಾವುದೇ ಮಸೂದೆ ಅಂಗೀಕಾರವಾದರೂ ರಾಜ್ಯಪಾಲರಾಗಿ ರಾಜಕೀಯ ನೇಮಕಾತಿಗೆ ನಾನು ಅವಕಾಶ ನೀಡುವುದಿಲ್ಲ. ಉಪಕುಲಪತಿಗಳನ್ನು ಬಳಸಿಕೊಂಡು ಕೆಲವು ಹುದ್ದೆಗಳಿಗೆ ಪದಾಧಿಕಾರಿಗಳ ಸಂಬಂಧಿಕರನ್ನು ನೇಮಿಸುವ ಪರಿಪಾಠವನ್ನು ಯಾವುದೇ ಸಂದರ್ಭದಲ್ಲೂ ಒಪ್ಪಲು ಸಾಧ್ಯವಿಲ್ಲ. ತಾನು ರಾಜ್ಯಪಾಲರಾಗಿದ್ದಾಗ ವಿಶ್ವವಿದ್ಯಾನಿಲಯಗಳ ಸ್ವಾಯತ್ತತೆಗೆ ಧಕ್ಕೆ ತರುವ ಯಾವುದೇ ಕ್ರಮಗಳನ್ನು ಮಂಜೂರು ಮಾಡಲು ಸಾಧ್ಯವಿಲ್ಲವೆಂದು ರಾಜ್ಯಪಾಲ ಆರಿಫ್ ಮುಹಮ್ಮದ್ ಖಾನ್ ಹೇಳಿದ್ದಾರೆ.
         ಸಾಂವಿಧಾನಿಕವಾಗಿ ಮತ್ತು ಪ್ರಜಾಸತ್ತಾತ್ಮಕವಾಗಿ ತನಗೆ ವಹಿಸಲಾದ ಕರ್ತವ್ಯಗಳನ್ನು  ಅಧಿಕಾರದಲ್ಲಿರುವವರೆಗೆ ಸರಿಯಾಗಿ ನಿರ್ವಹಿಸುವೆ. ವಿಶ್ವವಿದ್ಯಾಲಯಗಳಲ್ಲಿ ಅಕ್ರಮಗಳು ನಡೆದಾಗ ಕುಲಪತಿಯಾಗಿ ಅವಮಾನ ಅನುಭವಿಸುತ್ತಿದ್ದೇನೆ. ಪ್ರತಿಯೊಬ್ಬರೂ ಕಾನೂನಿನ ಪ್ರಕಾರ ಕಾರ್ಯನಿರ್ವಹಿಸಲು ಬದ್ಧರಾಗಿದ್ದಾರೆ ಎಂದು ರಾಜ್ಯಪಾಲರು ಹೇಳಿದರು.
           ಸಿಎಎ ವಿಷಯದಲ್ಲಿ ತನ್ನ  ನಿಲುವಿಗಾಗಿ ತನ್ನ ವಿರುದ್ಧ ಪಿತೂರಿ ನಡೆದಿದೆ. ಉಪಕುಲಪತಿಗಳೂ ಶಾಮೀಲಾಗಿದ್ದಾರೆ ಎಂದು ರಾಜ್ಯಪಾಲರು ಪುನರುಚ್ಚರಿಸಿದರು.



 

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries