HEALTH TIPS

ಸ್ವಾಮಿ ಅಯ್ಯಪ್ಪದಾಸ್ ಮೇಲೆ ದಾಳಿ; ಖಂಡಿಸಿದ ಅಯ್ಯಪ್ಪ ಸೇವಾ ಸಮಾಜ; ಕೇರಳ ಮುಕ್ತವಾಗಿ ಬದುಕಲು ಸಾಧ್ಯವಾಗದ ರಾಜ್ಯವಾಗುತ್ತಿರುವುದು ಬೇಸರದ ಸಂಗತಿ ಎಂದು ಹೇಳಿಕೆ


               ಕೊಚ್ಚಿ: ತೊಡುಪುಳದಲ್ಲಿ ಶಬರಿಮಲೆ ಅಯ್ಯಪ್ಪ ಸೇವಾ ಸಮಾಜದ ಸಂಸ್ಥಾಪಕ ಟ್ರಸ್ಟಿ ಸ್ವಾಮಿ ಅಯ್ಯಪ್ಪದಾಸ್ ಅವರ ಮೇಲೆ ನಡೆದ ದಾಳಿಯನ್ನು ಶಬರಿಮಲೆ ಅಯ್ಯಪ್ಪ ಸೇವಾ ಸಮಾಜ ತೀವ್ರವಾಗಿ ಖಂಡಿಸಿದೆ.
                ವಾಹನವನ್ನು ಓವರ್ ಟೇಕ್ ಮಾಡಿ ತಡೆದು ನಿಲ್ಲಿಸಿದ್ದಕ್ಕೆ ಸಿಟ್ಟಿಗೆದ್ದ ಜನರ ಗುಂಪು ಅವರ ಮೇಲೆ ಹಲ್ಲೆ ನಡೆಸಿರುವುದು ಅವರ ಹತ್ಯೆಯ ಯತ್ನ ಎಂದು ಶಂಕಿಸಲಾಗಿದೆ ಎಂದು ಅಯ್ಯಪ್ಪ ಸೇವಾ ಸಮಾಜವು ಬೆಟ್ಟು ಮಾಡಿದೆ.
            ಅಯ್ಯಪ್ಪ ಸೇವಾ ಸಮಾಜದ ಸ್ಥಾಪಕ ಟ್ರಸ್ಟಿ ಹಾಗೂ ಅಧ್ಯಾತ್ಮಿಕ ಸಂಘಟನೆಗಳ ಕಟ್ಟಾಳು ಸ್ವಾಮಿಯ ಹತ್ಯೆಗೆ ಸಂಚು ರೂಪಿಸಿರುವ ಎಲ್ಲಾ ಕ್ರಿಮಿನಲ್ ಗಳನ್ನು ಕೂಡಲೇ ಬಂಧಿಸಬೇಕು ಎಂದು ಅಯ್ಯಪ್ಪ ಸೇವಾ ಸಮಾಜದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಈರೋಡ್ ರಾಜನ್ ಆಗ್ರಹಿಸಿದ್ದಾರೆ.
          ಸ್ವಾಮಿ ಅಯ್ಯಪ್ಪದಾಸರು ಯಾವುದೇ ವರ್ಗದ ಜನರಿಗೆ ತೊಂದರೆಯಾಗದಂತೆ ಇಡೀ ಸಮಾಜದ ಒಳಿತಿಗಾಗಿ ಅವಿರತವಾಗಿ ಶ್ರಮಿಸುತ್ತಿರುವ ವ್ಯಕ್ತಿ. ಹಾಗಿರುವವರು ಕೂಡ ಶಾಂತಿಯುತವಾಗಿ ಮತ್ತು ಮುಕ್ತವಾಗಿ ಬದುಕಲು ಸಾಧ್ಯವಾಗದ ರಾಜ್ಯವಾಗಿ ಕೇರಳ ಬದಲಾಗುತ್ತಿದೆ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
         ಇದು ಇಡೀ ಮಠಾಧೀಶ ಸಮುದಾಯಕ್ಕೆ ಸವಾಲಾಗಿ ಪರಿಗಣಿಸಬೇಕು. ಜಮಾಲ್ ಎಂಬ ಆಟೋರಿಕ್ಷಾ ಚಾಲಕನ ಸಮಯೋಚಿತ ಮಧ್ಯಸ್ಥಿಕೆಯಿಂದ ಅಯ್ಯಪ್ಪದಾಸ ಸ್ವಾಮಿಯನ್ನು ಉಳಿಸಲಾಗಿದೆ ಎಂದು ಈರೋಡ್ ರಾಜನ್ ಹೇಳಿದ್ದಾರೆ.





Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries