ಕಾಸರಗೋಡು: ಕೂಡ್ಲು ಸಮೀಪದ ಬಾದಾರದಲ್ಲಿರುವ ಶೇಷವನ ಶ್ರೀ ಸುಬ್ರಹ್ಮಣ್ಯ ಸ್ವಾಮಿ ಸನ್ನಿಧಿಂiÀiಲ್ಲಿ ಶೇಷವನ ಶ್ರೀ ಸುಬ್ರಹ್ಮಣ್ಯ ಸ್ವಾಮಿ ಮಹಿಳಾ ಸಂಘದ ನೇತೃತ್ವದಲ್ಲಿ ವರಮಹಾಲಕ್ಷ್ಮಿ ಪೂಜೆ ವೈಭವದಿಂದ ಜರಗಿತು.
ಅರ್ಚಕರಾದ ಸುಬ್ರಾಯ ಕಾರಂತರ ನೇತೃತ್ವದಲ್ಲಿ ಪ್ರಕಾಶ ತುಂಗ ಮಧೂರು ಹಾಗು ಗೋಪಾಲಕೃಷ್ಣ ಕಾರಂತರ ಸಹಕಾರದಲ್ಲಿ ಕ್ಷೇತ್ರದ ಮಯೂರಮಂಟಪದಲ್ಲಿ ವರಮಹಾಲಕ್ಷ್ಮಿ ಜರಗಿತು. ಈ ಸಂದರ್ಭದಲ್ಲಿ ಶ್ರೀ ದೇವಿಗೆ ಮಹಿಳಾ ಸಂಘದ ವತಿಯಿಂದ ರಜತ ಮುಖ ಸಮರ್ಪಿಸಲಾಯಿತು.
ಮಹಿಳಾ ಸಂಘದ ರಕ್ಷಾಧಿಕಾರಿ ಆಶಾ ಉಪಾಧ್ಯಾಯ ಮಧೂರು, ಗೌರವ ಅಧ್ಯಕ್ಷೆ ಯಶೋಧ ಕಾರಂತ, ಅಧ್ಯಕ್ಷರಾದ ರತ್ನಾ ಪಾಯಿಚ್ಚಾಲ್, ಕಾರ್ಯದರ್ಶಿ ಲಾವಣ್ಯ ಭುವನೇಶ್ ನೇತೃತ್ವ ವಹಿಸಿದರು. ಶೇಷವನ ಶ್ರೀ ಸುಬ್ರಹ್ಮಣ್ಯ ಸ್ವಾಮಿ ದೇವಸ್ಥಾನ ಟ್ರಸ್ಟ್ನ ಆಡಳಿತ ಮೊಕ್ತೇಸರರಾದ ಕಿರಣ್ ಪ್ರಸಾದ್ ಕೂಡ್ಲು, ಕಾರ್ಯದರ್ಶಿ ವಸಂತ, ಕೋಶಾಧಿಕಾರಿ ಸುರೇಶ್ ನಾಯ್ಕ್. ಸದಸ್ಯರಾದ ಶರತ್ ನಾಯ್ಕ್, ಸುನಂದ ಹಾಗು ಶೇಷವನ ಶ್ರೀ ಸುಬ್ರಹ್ಮಣ್ಯ ಸ್ವಾಮಿ ಯುವಕ ಪದಾಧಿಕಾರಿಗಳು, ಸದಸ್ಯರು ಊರವರು ಸಮಾÀರಂಭದಲ್ಲಿ ಪಾಲ್ಗೊಂಡರು.